ಬಜ್ಪೆ : ಜ್ವರ ಮೆದುಳಿಗೆ ಬಾಧಿಸಿ ಅಂತಿಮ ವರ್ಷದ ಪಿಜಿ ವಿದ್ಯಾರ್ಥಿ ನಿಧನ - Karavali Times ಬಜ್ಪೆ : ಜ್ವರ ಮೆದುಳಿಗೆ ಬಾಧಿಸಿ ಅಂತಿಮ ವರ್ಷದ ಪಿಜಿ ವಿದ್ಯಾರ್ಥಿ ನಿಧನ - Karavali Times

728x90

2 June 2025

ಬಜ್ಪೆ : ಜ್ವರ ಮೆದುಳಿಗೆ ಬಾಧಿಸಿ ಅಂತಿಮ ವರ್ಷದ ಪಿಜಿ ವಿದ್ಯಾರ್ಥಿ ನಿಧನ

 ಬಂಟ್ವಾಳ, ಜೂನ್ 02, 2025 (ಕರಾವಳಿ ಟೈಮ್ಸ್) : ಮೂಲತಃ ಬಂಟ್ವಾಳ ತಾಲೂಕಿನ ಮಿತ್ತೂರು ನಿವಾಸಿ, ಪ್ರಸ್ತುತ ಬಜ್ಪೆಯಲ್ಲಿ ವಾಸವಾಗಿರುವ ಸಾಮಾಜಿಕ ಕಾಯಕರ್ತ ಅಬ್ದುಲ್ ಹಮೀದ್ ಮಿತ್ತೂರು ಅವರ ಪುತ್ರ, ಕೇರಳದ ಚೆಮ್ಮಾಡ್ ದಾರುಲ್ ಹುದಾ ಪಿಜಿ ಅಂತಿಮ ವರ್ಷದ ವಿದ್ಯಾರ್ಥಿ ಮುಹಿಯುದ್ದೀನ್ ತಬ್ಸೀರ್ ಹುದವಿ (23) ಅವರು ಜ್ವರ ತೀವ್ರಗೊಂಡು ಮೆದುಳಿಗೆ ಬಾಧಿಸಿದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. 

ಮೂಡುಬಿದಿರೆ-ಕಾಶಿಪಟ್ನದ ದಾರುನ್ನೂರಿನಲ್ಲಿ ಹತ್ತು ವರ್ಷಗಳ ಅಧ್ಯಯನ ಪೂರ್ಣಗೊಳಿಸಿ ಪ್ರಸ್ತುತ ಕೇರಳದ ಚೆಮ್ಮಾಡ್ ದಾರುಲ್ ಹುದಾ ಪಿಜಿಯ ಅಂತಿಮ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದ ಇವರಿಗೆ 10 ದಿವಸಗಳ ಹಿಂದೆ ಜ್ವರ ಭಾದಿಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಜ್ವರ ತೀವ್ರಗೊಂಡು ಮೆದುಳಿಗೆ ಬಾಧಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

  ಮೃತರು ತಂದೆ, ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.


  • Blogger Comments
  • Facebook Comments

0 comments:

Post a Comment

Item Reviewed: ಬಜ್ಪೆ : ಜ್ವರ ಮೆದುಳಿಗೆ ಬಾಧಿಸಿ ಅಂತಿಮ ವರ್ಷದ ಪಿಜಿ ವಿದ್ಯಾರ್ಥಿ ನಿಧನ Rating: 5 Reviewed By: karavali Times
Scroll to Top