ಬಂಟ್ವಾಳ, ಜೂನ್ 02, 2025 (ಕರಾವಳಿ ಟೈಮ್ಸ್) : ಕೊಲೆಯಾದ ವ್ಯಕ್ತಿಯ ಜೊತೆಗೆ ನಿಂತು ವ್ಯಕ್ತಿಯೋರ್ವರು ತೆಗೆದಿರುವ ಫೋಟೋ ದುರುಪಯೋಗ ಪಡಿಸಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕುರಿಯಾಳ ನಿವಾಸಿ ಧನುಷ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಇತ್ತೀಚೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊಲೆಗೀಡಾದ ಯುವಕನ ಜೊತೆಗೆ ನಿಂತು ತೆಗೆದ ಪೊಟೋವನ್ನು, ಈ ಹಿಂದೆ ಅವರ ಇನ್ಸ್ಟಾಗ್ರಾಮಿನಲ್ಲಿ ಫೋಸ್ಟ್ ಮಾಡಿದ್ದರು. ಅದೇ ಫೋಟೋವನ್ನು ದುರುಪಯೋಗಪಡಿಸಿಕೊಂಡು “ಟ್ರೋಲ್ ಅಬ್ರಹಾಂ” ಮತ್ತು :ಮೈಕಾಲ ಟ್ರೋಲ್” ಹಾಗೂ ‘’ಕರಾವಳಿ ಒಫಿಸಿಯಲ್” ಎಂಬ ಇನ್ಸ್ಟಾಗ್ರಾಮ್ ಪೇಜ್ ಗಳಲ್ಲಿ ಯಾರೋ ಕಿಡಿಗೇಡಿಗಳು ಕೋಮುದ್ವೇಷ ಭಾವನೆ ಉಂಟಾಗುವಂತಹ ಹಾಗೂ ಕೊಲೆ ಪ್ರಕರಣದ ಅಪರಾಧಿಯಂತೆ ಬಿಂಬಿಸಲಾಗುವ ಬರಹಗಳೊಂದಿಗೆ ಫೋಸ್ಟ್ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment