ಕಾನೂನು ಸುವ್ಯವಸ್ಥೆಗೆ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು : ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ 36 ಮಂದಿ ಗಡೀಪಾರಿಗೆ ಕಾನೂನು ಪ್ರಕ್ರಿಯೆ ಆರಂಭಿಸಿ ಪ್ರಸ್ತಾವನೆ ಸಲ್ಲಿಸಿದ ಖಾಕಿ ಪಡೆ - Karavali Times ಕಾನೂನು ಸುವ್ಯವಸ್ಥೆಗೆ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು : ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ 36 ಮಂದಿ ಗಡೀಪಾರಿಗೆ ಕಾನೂನು ಪ್ರಕ್ರಿಯೆ ಆರಂಭಿಸಿ ಪ್ರಸ್ತಾವನೆ ಸಲ್ಲಿಸಿದ ಖಾಕಿ ಪಡೆ - Karavali Times

728x90

2 June 2025

ಕಾನೂನು ಸುವ್ಯವಸ್ಥೆಗೆ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು : ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ 36 ಮಂದಿ ಗಡೀಪಾರಿಗೆ ಕಾನೂನು ಪ್ರಕ್ರಿಯೆ ಆರಂಭಿಸಿ ಪ್ರಸ್ತಾವನೆ ಸಲ್ಲಿಸಿದ ಖಾಕಿ ಪಡೆ

 ಮಂಗಳೂರು, ಜೂನ್ 02, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀರಾ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಹಳಿಗೆ ತರುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸಿರುವ ನೂತನ ಪೊಲೀಸ್ ಅಧಿಕಾರಿಗಳು ದಿನದಿಂದ ದಿನಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಮುಂದುವರಿದ ಭಾಗವಾಗಿ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಅಪರಾಧ ಚಟುವಟಿಕೆ ಹಿನ್ನಲೆ ಹೊಂದಿರುವ ಒಟ್ಟು 36 ಮಂದಿಯನ್ನು ಜಿಲ್ಲೆಯಿಂದ ಗಡೀಪಾರು ಮಾಡುವ ಕಾನೂನು ಪ್ರಕ್ರಿಯೆ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. 

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಸೈನಾರ್ (46), ಮಹಮ್ಮದ್ ಸಫ್ವಾನ್ (26), ರಾಜು ಯಾನೆ ರಾಜೇಶ್ (35), ಭುವಿ ಯಾನೆ ಭುವಿತ್ ಶೆಟ್ಟಿ (35), ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪವನ್ ಕುಮಾರ್ (33), ಚರಣ್ ಅಲಿಯಾಸ್ ಚರಣ್ ರಾಜ್ (28), ಅಬ್ದುಲ್ ಲತೀಫ್ (40), ಮಹಮ್ಮದ್ ಅಶ್ರಫ್ (44), ಮೊಯಿದಿನ್ ಅದ್ನಾನ್ ಅಲಿಯಾಸ್ ಅದ್ದು (24), ಭರತ್ ರಾಜ್ ಬಿ ಅಲಿಯಾಸ್ ಭರತ್ ಕುಮ್ಡೇಲು (38), ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ್ ಅಲಿಯಾಸ್ ಗಣೇಶ್ ಪೂಜಾರಿ (35), ಅಬ್ದುಲ್ ಖಾದರ್ ಅಲಿಯಾಸ್ ಸೌಕತ್ (34), ಚಂದ್ರಹಾಸ್ (23), ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ರಫ್ ಅಲಿಯಾಸ್ ಗರಗಸ ಅಶ್ರಫ್ (43), ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೋಜ್ ಕುಮಾರ್ (37), ಮಹೇಶ್ ಶೆಟ್ಟಿ ತಿಮರೋಡಿ (53), ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಕೀಂ ಕೂರ್ನಡ್ಕ ಅಲಿಯಾಸ್ ಅಬ್ದುಲ್ ಹಕೀಂ (38), ಅಜಿತ್ ರೈ (39), ಅರುಣ್ ಕುಮಾರ್ ಪುತ್ತಿಲ (54), ಮನೀಶ್ ಎಸ್ (34), ಅಬ್ದುಲ್ ರಹಿಮಾನ್ (38), ಕೆ ಅಝೀಝ್ (48), ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಶೋರ್ (34), ರಾಕೇಶ್ ಕೆ (30), ನಿಶಾಂತ್ ಕುಮಾರ್ (22), ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್ ನವಾಝ್ (32), ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೋಷ್ ಕುಮಾರ್ ರೈ ಅಲಿಯಾಸ್ ಸಂತು ಅಡೆಕ್ಕಲ್ (35), ಜಯರಾಮ (25), ಸಂಶುದ್ದೀನ್ (36), ಸಂದೀಪ್ (24), ಮಹಮ್ಮದ್ ಶಾಕೀರ್ (35), ಅಬ್ದುಲ್ ಅಝೀಝ್ ಅಲಿಯಾಸ್ ಕರಾಯ ಅಝೀಝ್ (36), ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಲತೇಶ್ ಗುಂಡ್ಯ (32), ಮನೋಹರ್ ಅಲಿಯಾಸ್ ಮನು (40), ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಾದ್ (35) ಹಾಗೂ ಶಮೀರ್ ಕೆ (38) ಎಂಬವರನ್ನು ಗಡೀಪಾರು ಪ್ರಸ್ತಾವನೆ ಸಲ್ಲಿಸಿರುವ ಪಟ್ಟಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹೆಸರಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾನೂನು ಸುವ್ಯವಸ್ಥೆಗೆ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು : ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ 36 ಮಂದಿ ಗಡೀಪಾರಿಗೆ ಕಾನೂನು ಪ್ರಕ್ರಿಯೆ ಆರಂಭಿಸಿ ಪ್ರಸ್ತಾವನೆ ಸಲ್ಲಿಸಿದ ಖಾಕಿ ಪಡೆ Rating: 5 Reviewed By: karavali Times
Scroll to Top