ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಸಂಸಾರಕ್ಕಾಗಿ ಏನನ್ನೂ ಮಾಡದೆ, ಜನರಿಗಾಗಿ ಮಿಡಿದ ಏಕೈಕ ಸ್ವಚ್ಛ, ಪಾರದರ್ಶಕ ರಾಜಕಾರಣಿ ರಮಾನಾಥ ರೈ : ಮಾಣಿಲ ಸ್ವಾಮೀಜಿ ಬಣ್ಣನೆ - Karavali Times ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಸಂಸಾರಕ್ಕಾಗಿ ಏನನ್ನೂ ಮಾಡದೆ, ಜನರಿಗಾಗಿ ಮಿಡಿದ ಏಕೈಕ ಸ್ವಚ್ಛ, ಪಾರದರ್ಶಕ ರಾಜಕಾರಣಿ ರಮಾನಾಥ ರೈ : ಮಾಣಿಲ ಸ್ವಾಮೀಜಿ ಬಣ್ಣನೆ - Karavali Times

728x90

12 June 2025

ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಸಂಸಾರಕ್ಕಾಗಿ ಏನನ್ನೂ ಮಾಡದೆ, ಜನರಿಗಾಗಿ ಮಿಡಿದ ಏಕೈಕ ಸ್ವಚ್ಛ, ಪಾರದರ್ಶಕ ರಾಜಕಾರಣಿ ರಮಾನಾಥ ರೈ : ಮಾಣಿಲ ಸ್ವಾಮೀಜಿ ಬಣ್ಣನೆ

 ಕಾರಾಜೆಯಲ್ಲಿ ಮಾಜಿ ಸಚಿವ ರೈ ಕುಟುಂಬದ ಮಾಲಕತ್ವದಲ್ಲಿ ಶ್ರೀ ಶೈಲ ಪೆಟ್ರೋಲ್ ಪಂಪ್ ಲೋಕಾರ್ಪಣೆ 


ಬಂಟ್ವಾಳ, ಜೂನ್ 12, 2025 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ಪುತ್ರ ಚೈತ್ರದೀಪ್ ರೈ ಹಾಗೂ ಪುತ್ರಿ ಚರಿಶ್ಮಾ ರೈ ಅವರ ಮಾಲಕತ್ವದಲ್ಲಿ ಸಜಿಪಮೂಡ ಗ್ರಾಮದ ಕಾರಾಜೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ “ಶ್ರೀ ಶೈಲ ಪೆಟ್ರೋಲ್” ನಾಮಾಂಕಿತ ಪೆಟ್ರೋಲ್ ಪಂಪ್ ಜೂನ್ 11 ರಂದು ಬುಧವಾರ  ಬೆಳಿಗ್ಗೆ 10.35ಕ್ಕೆ ಲೋಕಾರ್ಪಣೆಗೊಂಡಿತು. 

ಲೋಕಾರ್ಪಣೆಗೈದು ಆಶಿರ್ವಚನಗೈದ ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಮಾತನಾಡಿ, ಸುದೀರ್ಘ ಕಾಲದ ರಾಜಕೀಯ ಜೀವನದಲ್ಲಿ ಸರ್ವಸ್ವವನ್ನೂ ಸಮಾಜಕ್ಕಾಗಿ ಮೀಸಲಿಟ್ಟಿರುವ ಮಾಜಿ ಸಚಿವ ಬಿ ರಮಾನಾಥ ರೈ ಅವರು ತಮ್ಮ ಸಂಸಾರಕ್ಕಾಗಿ ಏನನ್ನೂ ಮಾಡಿದವರಲ್ಲ. ರಾಜಕೀಯ ಜೀವನದಲ್ಲಿ ತನ್ನ ಕ್ಷೇತ್ರದ ಮತದಾರ ಬಂಧುಗಳ ಹಿತವನ್ನೇ ಕಾಯುತ್ತಾ ಬಂದಿರುವ ರೈಗಳು ಇದೀಗ ಮಾಜಿ ಆದರೂ ಸದಾ ಜನರ ನಡುವೆ ಇದ್ದು ಜೀವನದ ಸುಖವನ್ನು ಅನುಭವಿಸುತ್ತಿದ್ದಾರೆ. ಇದೀಗ ತನ್ನ ಮಕ್ಕಳ ಮಾಲಕತ್ವದಲ್ಲಿ ಸಣ್ಣದೊಂದು ಪೆಟ್ರೋಲ್ ಪಂಪ್ ಉದ್ಯಮ ಆರಂಭಿಸಿದ್ದು, ಅದರಲ್ಲೂ ಜನಸೇವೆಯ ಕನಸನ್ನು ಕಾಣುತ್ತಿದ್ದಾರೆ ಎಂದರು. 

ಅಮ್ಟೂರು ಚರ್ಚ್ ಧರ್ಮಗುರು ಫಾಧರ್ ಅನಿಲ್ ಕ್ಯಾನೆಟ್ ಡಿಮೆಲ್ಲೋ, ಬೊಳ್ಳಾಯಿ ಮಸೀದಿ ಖತಿಬ್  ಕೆ ಎಚ್ ವಿ ಶಾಫಿ ಮದನಿ, ಕಾರಾಜೆ ಮಸೀದಿ ಖತೀಬ್ ಉಸ್ಮಾನ್ ಮದನಿ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಜಿ ಪಂ ಮಾಜಿ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ ಎಸ್ ಮುಹಮ್ಮದ್, ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಬಂಟ್ವಾಳ ತಾ ಪಂ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಮಾಜಿ ಸದಸ್ಯ ಸಂಜೀವ ಪೂಜಾರಿ ಬಿರ್ವ, ರಾಜಶೇಖರ್ ರೈ ಕಳ್ಳಿಗೆ, ಸಜಿಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ, ರೈ ಪತ್ನಿ ಧನಭಾಗ್ಯ ಆರ್ ರೈ, ಸಹೋದರಿ ಚೆನ್ನಮ್ಮ ಸಕಲೇಶಪುರ, ಪಂಪ್ ಮಾಲಕರಾದ ಚೈತ್ರದೀಪ್ ರೈ, ಚರಿಶ್ಮಾ ರೈ, ಎಂ ಆರ್ ಪಿ ಎಲ್ ಚೀಫ್ ರಿವಿಜನಲ್ ಮ್ಯಾನೇಜರ್ ಅರವಿಂದ್ ಆರ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಮಾಣಿ ಗ್ರಾ ಪಂ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್, ಪ್ರಮುಖರಾದ ಯೂಸುಫ್ ಕರಂದಾಡಿ, ಪರುಷೋತ್ತಮ ಪೂಜಾರಿ ಕಾರಾಜೆ, ಶೈಲೇಶ್ ಕುಚ್ಚಿಗುಡ್ಡೆ, ರಮೇಶ್ ಪಣೋಲಿಬೈಲ್, ಗಿರೀಶ್ ಕುಮಾರ್ ಪೆರ್ವ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಸಂಸಾರಕ್ಕಾಗಿ ಏನನ್ನೂ ಮಾಡದೆ, ಜನರಿಗಾಗಿ ಮಿಡಿದ ಏಕೈಕ ಸ್ವಚ್ಛ, ಪಾರದರ್ಶಕ ರಾಜಕಾರಣಿ ರಮಾನಾಥ ರೈ : ಮಾಣಿಲ ಸ್ವಾಮೀಜಿ ಬಣ್ಣನೆ Rating: 5 Reviewed By: karavali Times
Scroll to Top