ಬಂಟ್ವಾಳ, ಜೂನ್ 04, 2025 (ಕರಾವಳಿ ಟೈಮ್ಸ್) : ಮನೆ ಬಿಟ್ಟು ಹೋದ ವ್ಯಕ್ತಿಯೋರ್ವರು 18 ದಿನ ಕಳೆದರೂ ವಾಪಾಸು ಬರದೆ ಕಾಣೆಯಾಗಿರುವ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಣಂದೂರು ಗ್ರಾಮದ ಪಣಕಜೆ ನಿವಾಸಿ ರವಿಚಂದ್ರ ಎಸ್ ಎಂದು ಹೆಸರಿಸಲಾಗಿದೆ. ರವಿಚಂದ್ರ ಹಾಗೂ ಅವರ ಪತ್ನಿ ಬಬಿತಾ ಅವರು ಕೊಲ್ಪೆದಬೈಲುನಲ್ಲಿರುವ ಅನಿಲ್ ಎಂಬವರ ಮನೆಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿರುವುದಾಗಿದೆ. ಮೇ 15 ರಂದು ಬೆಳಿಗ್ಗೆ 10.30ರ ವೇಳೆಗೆ ರವಿಚಂದ್ರ ಅವರು ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಂದಿಲ್ಲ. ಇವರು ಈ ಹಿಂದೆ ಕೂಡಾ ಒಂದು ಬಾರಿ ಮನೆ ಬಿಟ್ಟು ಹೋದವರು ವಾರದ ಬಳಿಕ ವಾಪಸ್ಸು ಬಂದಿದ್ದರು ಎನ್ನಲಾಗಿದೆ. ಇದರಿಂದಾಗಿ ಈ ಬಾರಿಯೂ ಮರಳಿ ಬರಬಹುದು ಎಂದು ಇದುವರೆಗೂ ದೂರು ನೀಡದೆ ಸುಮ್ಮನಿದ್ದರು. ಆದರೆ ಇದೀಗ ಅವರು ಮನೆ ಬಿಟ್ಟು ಹೋಗಿ 18 ದಿನಗಳಾದರೂ ವಾಪಾಸು ಮನೆಗೆ ಬಾರದೆ ಇರುವ ಹಿನ್ನಲೆಯಲ್ಲಿ ಪತ್ನಿ ಬಬಿತಾ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment