ಪೊಲೀಸರ ಮುಂಜಾಗ್ರತಾ ಕ್ರಮ ವಿರೋಧಿಸಿ ರಾತೋ ರಾತ್ರಿ ಠಾಣಾ ಮುಂಭಾಗ ಜಮಾಯಿಸಿದವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಪೊಲೀಸರ ಮುಂಜಾಗ್ರತಾ ಕ್ರಮ ವಿರೋಧಿಸಿ ರಾತೋ ರಾತ್ರಿ ಠಾಣಾ ಮುಂಭಾಗ ಜಮಾಯಿಸಿದವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

1 June 2025

ಪೊಲೀಸರ ಮುಂಜಾಗ್ರತಾ ಕ್ರಮ ವಿರೋಧಿಸಿ ರಾತೋ ರಾತ್ರಿ ಠಾಣಾ ಮುಂಭಾಗ ಜಮಾಯಿಸಿದವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

 ಕಡಬ, ಜೂನ್ 02, 2025 (ಕರಾವಳಿ ಟೈಮ್ಸ್) : ಪೊಲೀಸರ ಮುಂಜಾಗ್ರತಾ ಕ್ರಮ ವಿರೋಧಿಸಿ ಕಡಬ ಪೊಲೀಸ್ ಠಾಣಾ ಮುಂಭಾಗ ರಾತೋ ರಾತ್ರಿ ಜಮಾಯಿಸಿದವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ದ.ಕ.  ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ  ವಿವಿಧ ಸಂಘಟನೆಗಳ ಪ್ರಮುಖರನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಪೊಲೀಸರ ಈ ಮುಂಜಾಗ್ರತಾ ಕ್ರಮವನ್ನು ವಿರೋಧಿಸಿ, ಭಾನುವಾರ ರಾತ್ರಿ ಕಡಬ ಠಾಣಾ ವ್ಯಾಪ್ತಿಯ ನಿವಾಸಿಗಳಾದ ಪ್ರಮೋದ್ ರೈ,   ನಂದುಗುರಿ, ತಿಲಕ್ , ನಂದುಗುರಿ, ಮೋಹನ, ಕೆರೆಕೋಡಿ, ಚಂದ್ರಶೇಖರ, ನೂಜಿಬಾಳ್ತಿಲ, ಮಹೇಶ್  ಕುಟ್ರುಪ್ಪಾಡಿ. ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನಂದುಗುರಿ, ಶ್ರೇಯತ್,  ನಂದುಗುರಿ, ಉಮೇಶ್,  ನೂಜಿಬಾಳ್ತಿಲ, ರಾದಾಕೃಷ್ಣ, ಕೆ., ಜಯಂತ್ ಹಾಗೂ ಇತರ ಮೂವರು ಯಾವುದೇ ಪೂರ್ವಾನುಮತಿ ಪಡೆಯದೇ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಬಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿರುತ್ತಾರೆ. ಅವರುಗಳ ವಿರುದ್ದ ಕಡಬ ಪೊಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2025 ಕಲಂ 189(2),190 BNS-2023 ರಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪೊಲೀಸರ ಮುಂಜಾಗ್ರತಾ ಕ್ರಮ ವಿರೋಧಿಸಿ ರಾತೋ ರಾತ್ರಿ ಠಾಣಾ ಮುಂಭಾಗ ಜಮಾಯಿಸಿದವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: lk
Scroll to Top