ಮುಂದುವರಿದ ಮಳೆ ಅಬ್ಬರ : ಬಂಟ್ವಾಳದಲ್ಲಿ ಮತ್ತೆ 9 ಮನೆಗಳಿಗೆ ಹಾನಿ ಪ್ರಕರಣ ವರದಿ - Karavali Times ಮುಂದುವರಿದ ಮಳೆ ಅಬ್ಬರ : ಬಂಟ್ವಾಳದಲ್ಲಿ ಮತ್ತೆ 9 ಮನೆಗಳಿಗೆ ಹಾನಿ ಪ್ರಕರಣ ವರದಿ - Karavali Times

728x90

17 June 2025

ಮುಂದುವರಿದ ಮಳೆ ಅಬ್ಬರ : ಬಂಟ್ವಾಳದಲ್ಲಿ ಮತ್ತೆ 9 ಮನೆಗಳಿಗೆ ಹಾನಿ ಪ್ರಕರಣ ವರದಿ

ಬಂಟ್ವಾಳ, ಜೂನ್ 17, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ವಿವಿಧೆಡೆ ಮತ್ತೆ 9 ಮನೆಗಳಿಗೆ ಹಾನಿಯಾದ ಪ್ರಕರಣ ವರದಿಯಾಗಿದೆ. 

ಪೆರುವಾಯಿ ಗ್ರಾಮದ ನಿವಾಸಿ ಜೆಸಿಂತಾ ಅವರ ಮನೆಯ ಸಿಮೆಂಟ್ ಶೀಟ್ ನ ಮೇಲ್ಛಾವಣಿಗೆ  ರತ್ನಾಕರ ಶೆಟ್ಟಿ ಅವರ ಖಾಲಿಯಿದ್ದ ನೀರಿನ ಸಿಂಟ್ಯಾಕ್ಸ್ ಟ್ಯಾಂಕ್ ಬಿದ್ದು ಹಾನಿ ಸಂಭವಿಸಿದೆ. ಬಂಟ್ವಾಳ ಮೂಡ ಗ್ರಾಮದ ನಿವಾಸಿ ಅಖಿಲೇಶ್ ಬಿನ್ ಚಂದ್ರಶೇಖರ ಅವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ. 

ಅಜ್ಜಿಬೆಟ್ಟು ಗ್ರಾಮದ ಆಲದಪದವು ನಿವಾಸಿ ಸುನೀತಾ ಕೋಂ ಸುರೇಶ ಅವರ ಪಕ್ಕಾ ಮನೆಗೆ ಹಾನಿಯಾಗಿದೆ. ಗುರುವ ಅವರ ಪಕ್ಕಾ ಮನೆ ಹಾನಿಯಾಗಿದ್ದು, ಪ್ರಸ್ತುತ ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಶ್ರೀನಿವಾಸ ನಗರ ನಿವಾಸಿ ಸುಂದರಿ ಕೋಂ ಬಾಬು ಅವರ ಪಕ್ಕಾ ಮನೆಗೆ ಹಾನಿಯಾಗಿದ್ದು, ಗ್ರಾಮ ಪಂಚಾಯತ್ ವತಿಯಿಂದ ತಾತ್ಕಾಲಿಕ ಟರ್ಪಾಲ್ ವ್ಯವಸ್ಥೆ ಮಾಡಲಾಗಿದೆ. 

ಕೊಯಿಲ ಗ್ರಾಮದ ಕೈತ್ರೋಡಿ ನಿವಾಸಿ ಲೀಲಾ ಕೋಂ ಅಣ್ಣಪ್ಪ ಗೌಡ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ. ಮೇರಮಜಲು ಗ್ರಾಮದ ನಿವಾಸಿ ಭವಾನಿ ಕೋಂ ಆನಂದ ಅವರ ಮನೆ ಮೇಲೆ ಮರ ಬಿದ್ದು ಹಂಚು ಹಾನಿಯಾಗಿದೆ. ನಮಿತಾ ಬಿನ್ ನಾರಾಯಣ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಹಂಚು ಹಾನಿಯಾಗಿದೆ. 

ಮಾಣಿಲ ಗ್ರಾಮದ ಓಟೆಪಡ್ಪು ನಿವಾಸಿ ಸೂರ್ಯನಾರಾಯಣ ಅವರ ಮನೆಯ ಕೊಟ್ಟಿಗೆಯ ಹಿಂಬದಿಗೆ ಗುಡ್ಡ ಕುಸಿದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮುಂದುವರಿದ ಮಳೆ ಅಬ್ಬರ : ಬಂಟ್ವಾಳದಲ್ಲಿ ಮತ್ತೆ 9 ಮನೆಗಳಿಗೆ ಹಾನಿ ಪ್ರಕರಣ ವರದಿ Rating: 5 Reviewed By: karavali Times
Scroll to Top