ಬಂಟ್ವಾಳ ತಾಲೂಕಿನಾದ್ಯಂತ ಮುಂದುವರಿದ ವ್ಯಾಪಕ ಮಳೆ : ಸುಮಾರು 25ಕ್ಕೂ ಅಧಿಕ ಕಡೆ ಮಳೆ ಹಾನಿ ಪ್ರಕರಣ ವರದಿ - Karavali Times ಬಂಟ್ವಾಳ ತಾಲೂಕಿನಾದ್ಯಂತ ಮುಂದುವರಿದ ವ್ಯಾಪಕ ಮಳೆ : ಸುಮಾರು 25ಕ್ಕೂ ಅಧಿಕ ಕಡೆ ಮಳೆ ಹಾನಿ ಪ್ರಕರಣ ವರದಿ - Karavali Times

728x90

16 June 2025

ಬಂಟ್ವಾಳ ತಾಲೂಕಿನಾದ್ಯಂತ ಮುಂದುವರಿದ ವ್ಯಾಪಕ ಮಳೆ : ಸುಮಾರು 25ಕ್ಕೂ ಅಧಿಕ ಕಡೆ ಮಳೆ ಹಾನಿ ಪ್ರಕರಣ ವರದಿ

ಬಂಟ್ವಾಳ, ಜೂನ್ 16, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಎಡೆ ಬಿಡದೆ ನಿರಂತರವಾಗಿ ಸುರಿಯುತ್ತಿದ್ದ ಭಾರೀ ಮಳೆ ಪರಿಣಾಮವಾಗಿ ಸುಮಾರು 25ಕ್ಕೂ ಹೆಚ್ಚು ಕಡೆ ಮಳೆ ಹಾನಿ ಪ್ರಕರಣಗಳು ವರದಿಯಾಗಿದೆ. 

ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆ ನಿವಾಸಿ ಪಿ ಬಿ ಅಬೂಬಕ್ಕರ್ ಅವರ ಮನೆಯ ಶೌಚಾಲಯ ಮತ್ತು ಸ್ನಾನಗೃಹಕ್ಕೆ ಮಳೆ ಗಾಳಿಯಿಂದ ಹಾನಿ ಸಂಭವಿಸಿ ನಷ್ಟ ಉಂಟಾಗಿದೆ. ಬೋರುಗುಡ್ಡೆ ನಿವಾಸಿ ಮಹಾಬಲ ಬಿನ್ ಶೇಖರ ಪೂಜಾರಿ ಅವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ. 

ಕರೋಪಾಡಿ ಗ್ರಾಮದ ಕಲ್ಕಾರು ನಿವಾಸಿ ರಹಮತ್ ಕೋಂ ಇಬ್ರಾಹಿಂ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿದೆ. ಅಮ್ಟಾಡಿ ಗ್ರಾಮದ ಬಾಂಬಿಲ-ತಲಂಬಿಲ ರಸ್ತೆಗೆ ಮಣ್ಣು ಜರಿದು ಬಿದ್ದಿದ್ದು, ಲೋಕೋಪಯೋಗಿ ಇಲಾಖೆಯಿಂದ ಮಣ್ಣು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ಸುಗಮ ರಸ್ತೆ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ತೆಂಕಕಜೆಕಾರು ಗ್ರಾಮದ ಬಾರ್ದೊಟ್ಟು ನಿವಾಸಿ ಶ್ರೀಮತಿ ಆಯಿಷಾ ಪಿ ಎಸ್ ಕೋಂ ಅಹಮದ್ ಕುಂಞÂ ಅವರ ದನದ ಹಟ್ಟಿ ಹಾಗೂ ಕಂಪೌಂಡ್ ಕುಸಿದು ಬಿದ್ದಿರುತ್ತದೆ. ಮೇರಮಜಲು ಗ್ರಾಮದ ಅಬ್ಬೆಟ್ಟು ನಿವಾಸಿ ನೋಣಯ ಬಿನ್ ನಂದಿ ಅವರ ಮನೆ ಗೋಡೆಗೆ ಗುಡ್ಡ ಕುಸಿದು ಭಾಗಶಃ ಹಾನಿ ಸಂಭವಿಸಿದೆ. ಕಲ್ಲಿಮಾರು ನಿವಾಸಿ ಪೂವಪ್ಪ ಮುಂಡಾಲ ಅವರ ಮನೆ ಹತ್ತಿರದ ಬರೆ ಕುಸಿದಿದೆ. ಕಂಗಿತೋಟ ನಿವಾಸಿ ಮೀನಾಕ್ಷಿ ಅವರ ಮನೆ ಗೋಡೆ ಜರಿದಿರುತ್ತದೆ. ಪ್ರಸ್ತುತ ಮನೆಯಲ್ಲಿ ಯಾರೂ ವಾಸವಾಗಿರುವುದಿಲ್ಲ.

ಸಂಗಬೆಟ್ಟು ಗ್ರಾಮದ ಕಂಡಿಗ ನಿವಾಸಿ ರೋಶನ್ ಸಿಕ್ವೆರಾ ಬಿನ್ ರೋಬರ್ಟ್ ಸಿಕ್ವೆರಾ ಅವರ ಶೌಚಾಲಯ ಕಟ್ಟಡ ಕುಸಿದಿದೆ. ಬಿ ಮೂಡ ಗ್ರಾಮದ ಉಮಾ ಎಸ್ ಭಟ್ ಅವರ ವಾಸ್ತವ್ಯದ ಮನೆಗೆ ಬರೆ ಜರಿದು ಬಿದ್ದು ಆಂಶಿಕ ಹಾನಿ ಸಂಭವಿಸಿದೆ. ಪುಣಚ ಗ್ರಾಮದ ನಿವಾಸಿ ವಾರಿಜ ಕೋಂ ನಾರಾಯಣ ನಾಯ್ಕ ಅವರ ವಾಸ್ತವ್ಯದ ಮನೆಗೆ ಗುಡ್ಡ ಕುಸಿದು ಹಾನಿ ಸಂಭವಿಸಿದೆ. ಇಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. 

ವಿಟ್ಲಪಡ್ನೂರು ಗ್ರಾಮದ ಎರ್ಮೆನಿಲೆ ನಿವಾಸಿ ಶೀನ ಪರವ ಬಿನ್ ಕರಿಯ ಪರವ ಅವರ ಮನೆಯ ಹಿಂಭಾಗದಲ್ಲಿ ಗುಡ್ಡ ಕುಸಿದಿರುತ್ತದೆ. ಮನೆ ಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿರುತ್ತಾರೆ. ಕಡೂರು-ಕಾಞಂಗಾಡ್ ರಾಜ್ಯ ಹೆದ್ದಾರಿಯ ಪಾತ್ರ ತೋಟ ಎಂಬಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳವನ್ನು ವಿಟ್ಲ ಪೆÇೀಲೀಸರು ಹಾಗೂ ವೀರಕಂಭ ಪಂಚಾಯತ್ ಉಪಾಧ್ಯಕ್ಷರು, ಸಿಬ್ಬಂದಿಯವರೊಂದಿಗೆ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಸೂಚನಾ ಟೇಪ್ ಅಳವಡಿಸಲಾಗಿದೆ. 

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾರ್ನೆಮಿಗುಡ್ಡೆ ನಿವಾಸಿ ಮುನೀರ ಅವರ ಕಾಂಪೌಂಡ್ ಕುಸಿದಿರುತ್ತದೆ.

ಪಿಲಿಮೊಗರು ಗ್ರಾಮದ ಸುನ್ನಡಪೆÇಲಿ ಎಂಬಲ್ಲಿ ಗುಡ್ಡ ಜರಿದು ಬುಡೋಳಿ ಗ್ರಾಮದಲ್ಲಿ ಹಾದು ಹೋಗುತ್ತಿರುವ ತೋಡಿನ ಮೇಲೆ ಬಿದ್ದು ಸಮೀಪದಲ್ಲಿರುವ ತೋಟಗಳಿಗೆ ನೀರು ಬಂದಿರುತ್ತದೆ. ಜೆಸಿಬಿ ಯಂತ್ರದಿಂದ ತೋಡು ಬಿಡಿಸಿ ಕೊಡುವ ಕಾರ್ಯ ಪ್ರಗತಿಯಲ್ಲಿದೆ. 

ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಕುಕ ಎಂಬಲ್ಲಿ ಗುಡ್ಡೆ ಜರಿದು ರಸ್ತೆ ಸಂಪೂರ್ಣ ಬಂದ್ ಆಗಿದ್ದು ಗ್ರಾಮ ಪಂಚಾಯತ್ ವತಿಯಿಂದ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೂಡುಪಡುಕೋಡಿ ಗ್ರಾಮ ವ್ಯಾಪ್ತಿಯ ಗುಂಪಕಲ್ಲು ನಿವಾಸಿ ದಿವಂಗತ ಇಸುಬು ಬ್ಯಾರಿ ಬಿನ್ ಉಸ್ಮಾನ್ ಬ್ಯಾರಿ (ಸೈನಾಜ್ ಬಿನ್ ಇಸುಬು ಬ್ಯಾರಿ) ಅವರ ವಾಸ್ತವ್ಯದ ಕಚ್ಚಾ ಮನೆಯ ಗೋಡೆ ಬಿದ್ದಿರುತ್ತದೆ. ಮನೆಯಲ್ಲಿರುವವರನ್ನು ಸುರಕ್ಷಿತ ಪ್ರದೇಶ/ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಬಿಳಿಯೂರು ಗ್ರಾಮದ ಕುಕ್ಕನೋಟು ಕರುವೇಲು ನಿವಾಸಿ ಅಬ್ದುಲ್ ರಝಾಕ್ ಅವರ ಮನೆಯ ಬದಿ ಬರೆ ಜರಿದಿರುತ್ತದೆ.

ಮಣಿನಾಲ್ಕೂರು ಗ್ರಾಮದ ಕೊಟ್ಟುಂಜ ಮಜಲು ಎಂಬಲ್ಲಿ ಸುಮಾರು 4 ಮನೆಗಳಿಗೆ ಸಂಪರ್ಕಿಸುವ ರಸ್ತೆಗೆ ಮಳೆ ನೀರು ನಿಂತಿದೆ. ಮಂಚಿ ಗ್ರಾಮದ ಕಲ್ಲಮರೈ ಮಸೀದಿ ಬಳಿ ನಿವಾಸಿ ಆಸ್ಯಮ್ಮ ಕೋಂ ಇಬ್ರಾಹಿಂ ಅವರ ಮನೆ ಹಾನಿ ಆಗಿರುವ ಬಗ್ಗೆ ಪಿಡಿಓ ಅವರ ಜೊತೆ ಜಂಟಿ ಸ್ಥಳ ಪರಿಶೀಲಿಸಲಾಗಿದ್ದು, ಅವರನ್ನು ಮಗಳ ಮನೆಗೆ ಸ್ಥಳಾಂತರಿಸಲಾಗಿದೆ. ಚೆನ್ನೈತ್ತೋಡಿ ಗ್ರಾಮದ ತಿಮರಡ್ಡ ನಿವಾಸಿ ನಾರಾಯಣ ಸೇವಂತ ಅವರ ತೋಟಕ್ಕೆ ಮರ ಬಿದ್ದು ಹಾನಿಯಾಗಿದೆ ಎಂದು ತಾಲೂಕು ತಹಶೀಲ್ದಾರ್ ಅವರು ಮಾಧ್ಯಮಗಳಿಗೆ ವಿವರ ನೀಡಿದ್ದಾರೆ.



  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತಾಲೂಕಿನಾದ್ಯಂತ ಮುಂದುವರಿದ ವ್ಯಾಪಕ ಮಳೆ : ಸುಮಾರು 25ಕ್ಕೂ ಅಧಿಕ ಕಡೆ ಮಳೆ ಹಾನಿ ಪ್ರಕರಣ ವರದಿ Rating: 5 Reviewed By: karavali Times
Scroll to Top