ಮೈಸೂರು, ಜೂನ್ 25, 2022 (ಕರಾವಳಿ ಟೈಮ್ಸ್) : ಮೈಸೂರು-ಶ್ರೀರಂಗಪಟ್ಟಣದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಖ್ವಾಜಾ ಅನ್ವರ್ ಅಲಿ ಶಾ ಚಿಶ್ತಿ (ಖ.ಸಿ.) ಅವರ 22ನೇ ಸಂದಲ್ ಕಾರ್ಯಕ್ರಮವು ಶ್ರೀರಂಗಪಟ್ಟಣದ ಗಂಜಾಂನಲ್ಲಿ ಇತ್ತೀಚೆಗೆ ನೆರವೇರಿತು.
ಮೈಸೂರು ಅತಾಯೇ ರಸೂಲ್ ಮೂವ್ಮೆಂಟ್ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಮೈಸೂರು ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸರ್ಗುರು ಹಝ್ರತ್ ಖ್ವಾಜಾ ಬಲ್ಹರ್ ಅಲಿ ಶಾ ಚಿಶ್ತಿ ದುವಾಶಿರ್ವಚನಗೈದರು. ಮುಹಮ್ಮದ್ ರೂಹುಲ್ಲಾ ಶಾ ಶಿತಾರಿ ಖಾದ್ರಿ, ಮುನವ್ವರ್ ವಲಿಯುಲ್ಲಾ ಶಾ ಖಾದ್ರಿ ವಲ್ ಚಿಶ್ತಿ, ಅಹ್ಮದುಲ್ಲಾ ಶಾ ಖಾದ್ರಿ ಉಲ್ ಚಿಶ್ತಿ, ಖಲೀಲ್ ಶಾ ಖಾದ್ರಿ, ಖ್ವಾಜಾ ಮೌದೂದ್ ಅಲಿ ಶಾ ಚಿಶ್ತಿ, ಖ್ವಾಜಾ ಇಂಝ್ಮಾಮ್ ಅಲಿ ಶಾ ಚಿಶ್ತಿ, ತಬಾರಕ್ ಶಾ ಖಾದ್ರಿ, ಖ್ವಾಜಾ ಫರ್ಮಾನ್ ಅಲಿ ಶಾ ಚಿಶ್ತಿ, ಖ್ವಾಜಾ ಸರ್ಫರಾಝ್ ಅಲಿ ಶಾ ಚಿಶ್ತಿ, ಖ್ವಾಜಾ ಯೂಸುಫ್ ಅಲಿ ಶಾ ಚಿಶ್ತಿ, ಖ್ವಾಜಾ ಮುಹೀತ್ ಅಲಿ ಶಾ ಚಿಶ್ತಿ, ಉಮ್ಮರ್ ಚಿಶ್ತಿ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನದಾನ ನಡೆಯಿತು.
0 comments:
Post a Comment