ಬಂಟ್ವಾಳ, ಜೂನ್ 26, 2022 (ಕರಾವಳಿ ಟೈಮ್ಸ್) : ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಇದರ ಸೆನೆಟ್ ಸದಸ್ಯರಾಗಿ ಮೂಲತಃ ಬಂಟ್ವಾಳ ತಾಲೂಕಿನ ವಾಮಪದವು ಸಮೀಪದ ಬಸ್ತಿಕೋಡಿ ನಿವಾಸಿ, ಪ್ರಾಧ್ಯಾಪಕ ಡಾ ಮುಸ್ತಫಾ ಬಸ್ತಿಕೋಡಿ ಅವರು ನೇಮಕಗೊಂಡಿದ್ದಾರೆ.
ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಎಚ್ ಒ ಡಿ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ ಮುಸ್ತಫಾ ಬಸ್ತಿಕೋಡಿ ಅವರ ತಾಂತ್ರಿಕ ಶಿಕ್ಷಣ, ಸಂಶೋಧನೆ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ವಿಟಿಯು ಶಿಫಾರಸ್ಸಿನ ಮೇರೆಗೆ 9ನೇ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಿ ರಾಜ್ಯಪಾಲರು ನೇಮಕ ಅಧಿಸೂಚನೆ ಹೊರಡಿಸಿದ್ದಾರೆ.
ಪ್ರಮುಖ ಶೈಕ್ಷಣಿಕ ಕಾರ್ಯತಂತ್ರಗಳು ಹಾಗೂ ನಿಯಮಗಳನ್ನು ರೂಪಿಸುವಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಅಕಾಡೆಮಿಕ್ ಸೆನೆಟ್ ಅತ್ಯುನ್ನತ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
ಡಾ ಮುಸ್ತಫಾ ಬಸ್ತಿಕೋಡಿ ಅವರು ಬಸ್ತಿಕೋಡಿ ನಿವಾಸಿ ವಾಮಪದವು ಹಾಜಿ ಅಬ್ದುಲ್ ರಹಿಮಾನ್ ಹಾಗೂ ಜಮೀಳಾ ದಂಪತಿಯ ಪುತ್ರ. ಹೋಟೆಲ್ ಉದ್ಯಮಿ, ಆನಿಯಾ ದರ್ಬಾರ್ ಸಮೂಹ ಸಂಸ್ಥೆಗಳ ಮಾಲಕ ಹಂಝ ಬಸ್ತಿಕೋಡಿ ಅವರ ಸಹೋದರನಾಗಿದ್ದಾರೆ.
0 comments:
Post a Comment