ಸುಹಾಸ್ ಶೆಟ್ಟಿ ಮರ್ಡರ್ ಘಟನೆಯನ್ನು ಕೇಂದ್ರ ತನಿಖಾ ತಂಡಕ್ಕೆ (ಎನ್.ಐ.ಎ) ವಹಿಸಿದ ಕೇಂದ್ರ ಗೃಹ ಸಚಿವಾಲಯ - Karavali Times ಸುಹಾಸ್ ಶೆಟ್ಟಿ ಮರ್ಡರ್ ಘಟನೆಯನ್ನು ಕೇಂದ್ರ ತನಿಖಾ ತಂಡಕ್ಕೆ (ಎನ್.ಐ.ಎ) ವಹಿಸಿದ ಕೇಂದ್ರ ಗೃಹ ಸಚಿವಾಲಯ - Karavali Times

728x90

8 June 2025

ಸುಹಾಸ್ ಶೆಟ್ಟಿ ಮರ್ಡರ್ ಘಟನೆಯನ್ನು ಕೇಂದ್ರ ತನಿಖಾ ತಂಡಕ್ಕೆ (ಎನ್.ಐ.ಎ) ವಹಿಸಿದ ಕೇಂದ್ರ ಗೃಹ ಸಚಿವಾಲಯ

ಮಂಗಳೂರು, ಜೂನ್ 08, 2025 (ಕರಾವಳಿ ಟೈಮ್ಸ್) : ರೌಡಿ ಶೀಟರ್, ಬಜ್ಪೆ ಪೆÇಲೀಸ್ ಠಾಣಾ ವ್ಯಾಪ್ತಿಯ ಬಜ್ಪೆ ಸಮೀಪದ ಕಿನ್ನ್ನಿಪದವಿನಲ್ಲಿ ಮೇ 1ರಂದು ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಿ ಶನಿವಾರ ಆದೇಶ ಹೊರಡಿಸಿದೆ. 

ಸುರತ್ಕಲ್ ನಿವಾಸಿ ಫಾಝಿಲ್ ಹತ್ಯಾ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಮೇ 1 ರಂದು ರಾತ್ರಿ ವೇಳೆ ಬಜ್ಪೆ ಸಮೀಪದ ಕಿನ್ನಿಪದವು ಎಂಬಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಸುಹಾಸ್ ಶೆಟ್ಟಿಯನ್ನು ಇತರ ವಾಹನಗಳಲ್ಲಿ ಬಂದ ತಂಡವೊಂದು ಬರ್ಬರವಾಗಿ ಕಡಿದು ಕೊಲೆ ನಡೆಸಿತ್ತು. ಕೊಲೆ ನಡೆದ ಬಳಿಕ ನಿರಂತರ ಪ್ರತಿಭಟನೆ ನಡೆಸಿದ ಹಿಂದೂ ಪರ ಸಂಘಟನೆಗಳು ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್ ಐ ಎ) ಕ್ಕೆ ವಹಿಸುವಂತೆ ಆಗ್ರಹಿಸುತ್ತಾ ಬಂದಿತ್ತು. ಇದೀಗ ಕೇಂದ್ರ ಗೃಹ ಸಚಿವಾಲಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸುವ ಆದೇಶವನ್ನು ಅಧಿಕೃತವಾಗಿ ಹೊರಡಿಸಿದೆ. ಇದೀಗ ಎನ್‍ಐಎ ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 11 ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಹಾಸ್ ಶೆಟ್ಟಿ ಮರ್ಡರ್ ಘಟನೆಯನ್ನು ಕೇಂದ್ರ ತನಿಖಾ ತಂಡಕ್ಕೆ (ಎನ್.ಐ.ಎ) ವಹಿಸಿದ ಕೇಂದ್ರ ಗೃಹ ಸಚಿವಾಲಯ Rating: 5 Reviewed By: karavali Times
Scroll to Top