ಅಳಕೆಮಜಲು : ಬೈಕುಗಳ ಮಧ್ಯೆ ಅಪಘಾತದಲ್ಲಿ ಓರ್ವ ಸವಾರ ಆಸ್ಪತ್ರೆಗೆ - Karavali Times ಅಳಕೆಮಜಲು : ಬೈಕುಗಳ ಮಧ್ಯೆ ಅಪಘಾತದಲ್ಲಿ ಓರ್ವ ಸವಾರ ಆಸ್ಪತ್ರೆಗೆ - Karavali Times

728x90

8 June 2025

ಅಳಕೆಮಜಲು : ಬೈಕುಗಳ ಮಧ್ಯೆ ಅಪಘಾತದಲ್ಲಿ ಓರ್ವ ಸವಾರ ಆಸ್ಪತ್ರೆಗೆ

ಬಂಟ್ವಾಳ, ಜೂನ್ 08, 2025 (ಕರಾವಳಿ ಟೈಮ್ಸ್) : ಬೈಕುಗಳ ನಡುವೆ ಅಪಘಾತ ಸಂಭವಿಸಿ ಓರ್ವ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅಳಕೆಮಜಲು ಎಂಬಲ್ಲಿ ಶನಿವಾರ ಸಂಭವಿಸಿದೆ. 

ಗಾಯಾಳು ಸವಾರನನ್ನು ಶ್ರೀಕೃಷ್ಣ ಭಟ್ ಎಂದು ಹೆಸರಿಸಲಾಗಿದೆ. ಇವರು ತನ್ನ ಬೈಕಿನಲ್ಲಿ ಶಾಂತಿಗೋಡು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಸಂದರ್ಭ ವಿಟ್ಲ ಕಡೆಯಿಂದ ಕಬಕ ಕಡೆಗೆ ಬೈಕ್ ಸವಾರಿ ಮಾಡಿಕೊಂಡು ಬಂದ ಅಪ್ರಾಪ್ತ ಸವಾರ ಅಪೈಲ್ ಎಂಬಾತ ಶ್ರೀಕೃಷ್ಣ ಭಟ್ ಅವರ ಬೈಕಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಎರಡೂ ಸವಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಈ ಪೈಕಿ ಶ್ರೀಕೃಷ್ಣ ಭಟ್ ಅವರಿಗೆ ಗಾಯಗಳಾಗಿದ್ದು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಳಕೆಮಜಲು : ಬೈಕುಗಳ ಮಧ್ಯೆ ಅಪಘಾತದಲ್ಲಿ ಓರ್ವ ಸವಾರ ಆಸ್ಪತ್ರೆಗೆ Rating: 5 Reviewed By: karavali Times