ಬಂಟ್ವಾಳ, ಆಗಸ್ಟ್ 31, 2025 (ಕರಾವಳಿ ಟೈಮ್ಸ್) : ಸುಳ್ಳು ದೂರು ನೀಡಿರುವ ಆರೋಪಿಯ ಪರವಾಗಿ ಸಾಮಾಜಿಕ ಜಾಲ ತಾಣವಾದ ಫೇಸ್ ಬುಕ್ ಪೇಜಿನಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 13 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 68/2025 ರ ಪ್ರಕರಣದಲ್ಲಿ ದೂರುದಾರ ಉಮ್ಮರ್ ಫಾರೂಕ್ ಎಂಬವರು ದೇರಾಜೆ ಬಳಿ ಇಬ್ಬರು ಅಪರಿಚಿತರು ಕೊಲೆ ಮಾಡಲು ಯತ್ನಿಸಿರುವ ಬಗ್ಗೆ ನೀಡಿದ ದೂರನ್ನು ಪೊಲೀಸರು ತನಿಖೆ ನಡೆಸಿದ್ದು, ಇದೊಂದು ಸುಳ್ಳು ದೂರಾಗಿರುವುದರಿಂದ ಉಮ್ಮರ್ ಫಾರೂಕ್ ವಿರುದ್ದ ಆಗಸ್ಟ್ 26 ರಂದು ಠಾಣಾ ಅಪರಾಧ ಕ್ರಮಾಂಕ 128/2025 ಕಲಂ 192, 353(1)(ಬಿ), 230(1), 248(ಎ) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
ಈ ವಿಚಾರವಾಗಿ ಆಗಸ್ಟ್ 28 ರಂದು ಸಾಮಾಜಿಕ ಜಾಲ ತಾಣವಾದ ಫೇಸ್ ಬುಕಿನ ಅಶ್ರಫ್ ತಲಪಾಡಿ ಎಂಬ ಪೇಜಿನಲ್ಲಿ ಕಾನೂನು ಬಧ್ದವಾದ ಆಧಾರಗಳು ಇಲ್ಲವೆಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಸುಳ್ಳು ಆಪಾದÀನೆ ಮಾಡಿದ ಅಶ್ರಪ್ ಬಂಟ್ವಾಳ ತಾಲೂಕು ಎಂಬುವರಿಗೆ ನೋಟಿಸ್ ಜಾರಿ ಮಾಡಿ ಆತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2025 ಕಲಂ 353(1)(ಬಿ)(2), 192 ಬಿ ಎನ್ ಎಸ್ ಕಾಯಿದೆಯಂತೆ ಪ್ರಕಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment