ತುಂಬೆಯಲ್ಲಿ ಜಾನುವಾರು ಕಳವು ಮಾಡಿ ಹತ್ಯೆಗೈದ ಆರೋಪಿಗಳ ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು : ಪೆರ್ನೆ ಪ್ರಕರಣದಲ್ಲೂ ಆರೋಪಿಗಳ ಕೈವಾಡ ಪತ್ತೆ - Karavali Times ತುಂಬೆಯಲ್ಲಿ ಜಾನುವಾರು ಕಳವು ಮಾಡಿ ಹತ್ಯೆಗೈದ ಆರೋಪಿಗಳ ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು : ಪೆರ್ನೆ ಪ್ರಕರಣದಲ್ಲೂ ಆರೋಪಿಗಳ ಕೈವಾಡ ಪತ್ತೆ - Karavali Times

728x90

5 September 2025

ತುಂಬೆಯಲ್ಲಿ ಜಾನುವಾರು ಕಳವು ಮಾಡಿ ಹತ್ಯೆಗೈದ ಆರೋಪಿಗಳ ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು : ಪೆರ್ನೆ ಪ್ರಕರಣದಲ್ಲೂ ಆರೋಪಿಗಳ ಕೈವಾಡ ಪತ್ತೆ

ಬಂಟ್ವಾಳ, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಪ್ತಿಯ ತುಂಬೆ ಬಳಿ ಆಗಸ್ಟ್ 14 ರಂದು ನಡೆದ ಜಾನುವಾರು ಕಳವು ಹಾಗೂ ಮರುದಿನ ಅದರ ಅಂಗಾಂಗ ಪತ್ತೆಯಾದ ಪ್ರಕರಣ ಬೇಧಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಉಳ್ಳಾಲ-ಚೆಂಬುಗುಡ್ಡೆ ನಿವಾಸಿ ಇರ್ಶಾದ್ (34), ಮಂಗಳೂರು-ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48) ಹಾಗೂ ಮಂಗಳೂರು-ಕಣ್ಣೂರು ನಿವಾಸಿ ಅಬ್ದುಲ್ ಅಝೀಂ (18) ಎಂದು ಹೆಸರಿಸಲಾಗಿದೆ. 

ಆಗಸ್ಟ್ 14 ರಂದು ತುಂಬೆ ಬಳಿ ಜಾನುವಾರು ಕಳವು ಹಾಗೂ ಅದರ ಅಂಗಾಗಗಳು ಮರುದಿನ  ಅಲ್ಲೆ ಸಮೀಪದಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಶುಕ್ರವಾರ ಆರೋಪಿಗಳನ್ನು ಬಂಧಿಸಿದ್ದಾರೆ. 

ಆರೋಪಿಗಳ ವಿಚಾರಣೆಯ ವೇಳೆ ಗುರುವಾರ (ಆಗಸ್ಟ್ 4) ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲೂ ಆರೋಪಿಗಳಾಗಿರುವುದು ತಿಳಿದುಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತುಂಬೆಯಲ್ಲಿ ಜಾನುವಾರು ಕಳವು ಮಾಡಿ ಹತ್ಯೆಗೈದ ಆರೋಪಿಗಳ ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು : ಪೆರ್ನೆ ಪ್ರಕರಣದಲ್ಲೂ ಆರೋಪಿಗಳ ಕೈವಾಡ ಪತ್ತೆ Rating: 5 Reviewed By: karavali Times
Scroll to Top