ಫೇಸ್ ಬುಕ್ ಪೇಜಿನಲ್ಲಿ ರಾಜಕೀಯ ನಾಯಕರ ನಿಂದನೆ : ವ್ಯಕ್ತಿಯ ವಿರುದ್ದ ಪತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಫೇಸ್ ಬುಕ್ ಪೇಜಿನಲ್ಲಿ ರಾಜಕೀಯ ನಾಯಕರ ನಿಂದನೆ : ವ್ಯಕ್ತಿಯ ವಿರುದ್ದ ಪತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

19 September 2025

ಫೇಸ್ ಬುಕ್ ಪೇಜಿನಲ್ಲಿ ರಾಜಕೀಯ ನಾಯಕರ ನಿಂದನೆ : ವ್ಯಕ್ತಿಯ ವಿರುದ್ದ ಪತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : ಫೇಸ್ ಬುಕ್ ಪೇಜಿನಲ್ಲಿ ರಾಜಕೀಯ ಪಕ್ಷವೊಂದರ ನಾಯಕರಿಗೆ ಅವಾಚ್ಯವಾಗಿ ನಿಂದಿಸಿರುವ ಆರೋಪದಲ್ಲಿ ನವೀನ್ ರೈ ಕೈಕಾರ ಎಂಬಾತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಪುತ್ತೂರು ಕಸಬಾ ಗ್ರಾಮದ ನಿವಾಸಿ ಶಿವಕುಮಾರ್ ಪಿ ಬಿ (54) ಅವರು ದೂರು ನೀಡಿದ್ದು, ಇವರು ತನ್ನ ಮೊಬೈಲಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ವೀಕ್ಷಿಸುತ್ತಿದ್ದಾಗ, ಆರೋಪಿ ನವೀನ್ ರೈ ಕೈಕಾರ ಎಂಬಾತನು, ಆತನ ಪೇಸ್ಬುಕ್ ಪೇಜಿನಲ್ಲಿ ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚವಾಗಿ ನಿಂದಿಸಿರುವ  ವಿಡಿಯೋವನ್ನು ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ ಎಂದು ನೀಡಿದ ದೂರಿನಂತೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫೇಸ್ ಬುಕ್ ಪೇಜಿನಲ್ಲಿ ರಾಜಕೀಯ ನಾಯಕರ ನಿಂದನೆ : ವ್ಯಕ್ತಿಯ ವಿರುದ್ದ ಪತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top