ಬಂಟ್ವಾಳ, ಸೆಪ್ಟೆಂಬರ್ 14, 2025 (ಕರಾವಳಿ ಟೈಮ್ಸ್) : ಬಂಟ್ವಾಳ ನ್ಯಾಯಾಲಯದಲ್ಲಿ ಬಾಕಿ ಇದ್ದ 6228 ಪ್ರಕರಣಗಳ ಪೈಕಿ ಶನಿವಾರ ನಡೆದ ಲೋಕ ಅದಾಲತಿನಲ್ಲಿ 785 ಪ್ರಕರಣಗಳು ಇತ್ಯರ್ಥಗೊಂಡು 32,68,475/- ರೂಪಾಯಿ ಸಂಗ್ರಹವಾಗಿದೆ. ಅದೇ ರೀತಿ ಒಟ್ಟು 9898 ಪಿ ಎಲ್ ಸಿ ಪ್ರಕರಣಗಳು (ದಾವಾ ಪೂರ್ಣ ಪ್ರಕರಣಗಳು) ಇತ್ಯರ್ಥಗೊಂಡಿದ್ದು, 3,02,54,522/- ರೂಪಾಯಿ ಸಂದಾಯವಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ ಪಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಕೃಷ್ಣಮೂರ್ತಿ ಎನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಕೆ ಎಸ್ ಹಾಗೂ ನ್ಯಾಯಿಕ ಸಂಧಾನಕಾರರಾದ ಅನುರಾಧ ಎ ವಿ, ಪೂಜಾಶ್ರೀ ಮತ್ತು ಕಾರ್ತಿಕ್ ಅವರು ಅದಾಲತಿನಲ್ಲಿ ಭಾಗವಹಿಸಿದ್ದರು.
ಲೋಕ ಅದಾಲತಿಗೆ ಬಂಟ್ವಾಳ ವಕೀಲರ ಸಂಘ, ಕಂದಾಯ ಇಲಾಖೆ, ಪುರಸಭೆ, ಪೆÇಲೀಸ್ ಇಲಾಖೆ, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಸಂಸ್ಥೆಗಳು ಸಹಕರಿಸಿದೆ.














0 comments:
Post a Comment