ಮೃತದೇಹ ಸಾಗಾಟದ ಅಂಬ್ಯುಲೆನ್ಸ್ ಓವರ್ ಟೇಕ್ ಮಾಡಿ ತಡೆದು, ಬೆದರಿಕೆ ಹಾಕಿದ ಬೊಲೆರೋ ಪ್ರಯಾಣಿಕರು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಮೃತದೇಹ ಸಾಗಾಟದ ಅಂಬ್ಯುಲೆನ್ಸ್ ಓವರ್ ಟೇಕ್ ಮಾಡಿ ತಡೆದು, ಬೆದರಿಕೆ ಹಾಕಿದ ಬೊಲೆರೋ ಪ್ರಯಾಣಿಕರು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

13 October 2025

ಮೃತದೇಹ ಸಾಗಾಟದ ಅಂಬ್ಯುಲೆನ್ಸ್ ಓವರ್ ಟೇಕ್ ಮಾಡಿ ತಡೆದು, ಬೆದರಿಕೆ ಹಾಕಿದ ಬೊಲೆರೋ ಪ್ರಯಾಣಿಕರು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು, ಅಕ್ಟೋಬರ್ 13, 2025 (ಕರಾವಳಿ ಟೈಮ್ಸ್) : ಮೃತದೇಹ ಹಾಗೂ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ವಾಹನವನ್ನು ಬೊಲೋರೋ ವಾಹನವೊಂದು ಓವರ್ ಟೇಕ್ ಮಾಡಿ ರಸ್ತೆಗೆ ಅಡ್ಡಗಟ್ಟಿ ಅಕ್ರವಾಗಿ ತಡೆಗಟ್ಟಿದ ಘಟನೆ ಪಡ್ನೂರು ಗ್ರಾಮದ ಕಾರ್ಲ ಶ್ರೀರಾಮ ಭಜನಾ ಮಂದಿರದ ಬಳಿ ಅ 12 ರಂದು ಮಧ್ಯರಾತ್ರಿ ವೇಳೆ ನಡೆದಿದೆ. 

ಅಂಬ್ಯುಲೆನ್ಸಿನಲ್ಲಿ ಮೃತಪಟ್ಟ  ಬಾಲಕಿಯ ಶವವಿದ್ದು, ಮೃತರ ಕುಟುಂಬಸ್ಥರು ಗಾಯಗೊಂಡ ಪರಿಸ್ಥಿತಿಯಲ್ಲಿದ್ದರು. ಆದರೆ ಆರೋಪಿಗಳು ಅಂಬ್ಯುಲೆನ್ಸಿನಲ್ಲಿದ್ದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ  ಎಂದು ಪುತ್ತೂರು ನಿವಾಸಿ ಅವಿನಾಶ್  ಎಂ (32) ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/2025 ಕಲಂ 126(2), 352, 351 (2), ಜೊತೆಗೆ 3(5) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮೃತದೇಹ ಸಾಗಾಟದ ಅಂಬ್ಯುಲೆನ್ಸ್ ಓವರ್ ಟೇಕ್ ಮಾಡಿ ತಡೆದು, ಬೆದರಿಕೆ ಹಾಕಿದ ಬೊಲೆರೋ ಪ್ರಯಾಣಿಕರು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top