ಬಿ.ಸಿ.ರೋಡು ಪೇಟೆಯಲ್ಲಿ ದುರ್ನಾತ ಬೀರುತ್ತಿರುವ ತೆರೆದ ಚರಂಡಿ : ಕಾಯಕಲ್ಪಕ್ಕೆ ಆಗ್ರಹ - Karavali Times ಬಿ.ಸಿ.ರೋಡು ಪೇಟೆಯಲ್ಲಿ ದುರ್ನಾತ ಬೀರುತ್ತಿರುವ ತೆರೆದ ಚರಂಡಿ : ಕಾಯಕಲ್ಪಕ್ಕೆ ಆಗ್ರಹ - Karavali Times

728x90

12 January 2026

ಬಿ.ಸಿ.ರೋಡು ಪೇಟೆಯಲ್ಲಿ ದುರ್ನಾತ ಬೀರುತ್ತಿರುವ ತೆರೆದ ಚರಂಡಿ : ಕಾಯಕಲ್ಪಕ್ಕೆ ಆಗ್ರಹ

ಬಂಟ್ವಾಳ, ಜನವರಿ 12, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಯಾಗಿರುವ ಬಿ ಸಿ ರೋಡು ಪಟ್ಟಣದ ಜಂಕ್ಷನ್ನಿನಲ್ಲಿ ತೆರೆದ ಚರಂಡಿಯಲ್ಲಿರುವ ಕೊಳಚೆ ನೀರು ಪರಿಸರವಿಡೀ ದುರ್ನಾತ ಪಸರಿಸುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿ ಸಿ ರೋಡಿನ ಎಲ್ ಡಿ ಬ್ಯಾಂಕ್ ಮುಂಭಾಗದ ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ಡಿವೈಎಸ್ಪಿ ಕಚೇರಿಗೆ ಹೋಗುವ ರಸ್ತೆಯ ಬದಿಯಲ್ಲೇ ಈ ಚರಂಡಿ ಕಳೆದ ಹಲವು ದಿನಗಳಿಂದ ಬಾಯಿ ತೆರೆದುಕೊಂಡಿದೆ. ಬಾಯಿ ತೆರೆದಿರುವ ಈ ಚರಂಡಿಯ ಒಳಭಾಗದಲ್ಲಿರುವ ಕೊಳಚೆಯುಕ್ತ ನೀರು ಎದ್ದು ಕಾಣುವಂತಿದೆ. ಅಲ್ಲದೆ ಇದರ ಗಬ್ಬು ವಾಸನೆ ಪರಿಸರವಿಡೀ ಬೀರುತ್ತಿದ್ದು, ಸಾರ್ವಜನಿಕರು ನಿತ್ಯವೂ ಮೂಗು ಮುಚ್ಚಿ ನಡೆದಾಡಬೇಕಾದ ಸ್ಥಿತಿ ಇಲ್ಲಿದೆ. ಈ ಪ್ರದೇಶದಲ್ಲಿ ಬ್ಯಾಂಕುಗಳ ಸಹಿತ ಹಲವು ಅಂಗಡಿಗಳು, ಪೋಲೀಸ್ ಠಾಣೆ, ದೇವಸ್ಥಾನ ಮೊದಲಾದ ವ್ಯವಸ್ಥೆಗಳಿದ್ದು, ನಿತ್ಯವೂ ಈ ಜಾಗದಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ಇದೇ ಪ್ರದೇಶದಲ್ಲಿ ಹಾದುಹೋಗಬೇಕಾಗಿದೆ. ಅಲ್ಲದೆ ಸಮೀಪದಲ್ಲೇ ಖಾಸಗಿ ಕಾರು ಪಾರ್ಕಿಂಗ್ ಕೂಡಾ ಇಲ್ಲಿದ್ದು ಈ ಪ್ರದೇಶದಲ್ಲಿ ಒಂದು ನಿಮಿಷವೂ ನಿಂತುಕೊಳ್ಳದ ಪರಿಸ್ಥಿತಿ ಇದೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದುರ್ನಾತ ಮಾತ್ರವಲ್ಲದೆ ಬಾಯಿ ತೆರೆದ ಈ ಚರಂಡಿ ಸಾರ್ವಜನಿಕರ ಪಾಲಿಗೆ ಅಪಾಯವನ್ನೂ ಆಹ್ವಾನಿಸುವಂತಿದೆ. ತಕ್ಷಣ ಸಂಬಂಧಪಟ್ಟವರು ಇಲ್ಲಿನ ತೆರೆದ ಚರಂಡಿಗೆ ಸೂಕ್ತ ಕಾಯಕಲ್ಪ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು ಪೇಟೆಯಲ್ಲಿ ದುರ್ನಾತ ಬೀರುತ್ತಿರುವ ತೆರೆದ ಚರಂಡಿ : ಕಾಯಕಲ್ಪಕ್ಕೆ ಆಗ್ರಹ Rating: 5 Reviewed By: karavali Times
Scroll to Top