ಬೆಳ್ತಂಗಡಿ ಬಾಲಕಿಯ ಅಪಹರಣ ಯತ್ನ, ಚೂರಿ ಇರಿತ ಘಟನೆಗೆ ಮಹತ್ವದ ತಿರುವು : ಪೊಲೀಸರ ತನಿಖೆಯಿಂದ ಕಟ್ಟುಕಥೆ ಬಯಲು - Karavali Times ಬೆಳ್ತಂಗಡಿ ಬಾಲಕಿಯ ಅಪಹರಣ ಯತ್ನ, ಚೂರಿ ಇರಿತ ಘಟನೆಗೆ ಮಹತ್ವದ ತಿರುವು : ಪೊಲೀಸರ ತನಿಖೆಯಿಂದ ಕಟ್ಟುಕಥೆ ಬಯಲು - Karavali Times

728x90

10 February 2026

ಬೆಳ್ತಂಗಡಿ ಬಾಲಕಿಯ ಅಪಹರಣ ಯತ್ನ, ಚೂರಿ ಇರಿತ ಘಟನೆಗೆ ಮಹತ್ವದ ತಿರುವು : ಪೊಲೀಸರ ತನಿಖೆಯಿಂದ ಕಟ್ಟುಕಥೆ ಬಯಲು

ಬೆಳ್ತಂಗಡಿ, ಫೆಬ್ರವರಿ 10, 2026 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿಯ ಅಪಹರಣ, ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ದೊರೆತಿದೆ. ಪೊಲೀಸರ ತನಿಖೆಯಿಂದ ಇದೊಂದು ಕಟ್ಟುಕಥೆ ಎಂಬುದು ಬಯಲಾಗಿದ್ದು, ವಿದ್ಯಾರ್ಥಿನಿಯೇ ಸ್ವತಃ ಗಾಯಮಾಡಿಕೊಂಡು ಸುಳ್ಳು ಹೇಳಿಕೆ ನೀಡಿದ್ದಾಳೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಇದರಿಂದ ಜನ ನಿಟ್ಟುಸಿರುವ ಬಿಡುವಂತಾಗಿದೆ. 

ಪೊಲೀಸರು ಸೀಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ ವೇಳೆ ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದಂತೆ ಯಾವುದೇ ವಾಹನ ಕಂಡುಬಂದಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮವಾಗಿ ಇದು ಸ್ವಯಂ ಉಂಟು ಮಾಡಿಕೊಂಡ ಗಾಯ ಎಂದು ತಿಳಿಸಲಾಗಿದೆ. ನಂತರ ಬಾಲಕಿಯ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಲಾಗಿದ್ದು, ಈ ಘಟನೆ ಕುರಿತು ತಾನು ಸುಳ್ಳು ಹೇಳಿಕೆ ನೀಡಿದ್ದೆನೆಂದು ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಆಕೆಯ ಹಿತದೃಷ್ಠಿಯಿಂದ ಸದ್ರಿ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಅವರಿಂದ ಬಾಲಕಿಗೆ ಕೌನ್ಸೆಲಿಂಗ್ ನೀಡಲಾಗುವುದು ಹಾಗೂ ಮುಂದಿನ ಕಾನೂನು ಕ್ರಮದ ಬಗ್ಗೆ ನಿರ್ಧರಿಸಲಾಗುವುದು. ಅಪ್ರಾಪ್ತೆಗೆ ಚಲಾಯಿಸಲು ವಾಹನ ನೀಡಿರುವ  ಕುರಿತು  ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ಡಾ ಅರುಣೆ ಕೆ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ ಬಾಲಕಿಯ ಅಪಹರಣ ಯತ್ನ, ಚೂರಿ ಇರಿತ ಘಟನೆಗೆ ಮಹತ್ವದ ತಿರುವು : ಪೊಲೀಸರ ತನಿಖೆಯಿಂದ ಕಟ್ಟುಕಥೆ ಬಯಲು Rating: 5 Reviewed By: karavali Times
Scroll to Top