ಕರಾವಳಿ ಅಭಿವೃದ್ದಿಗೆ ಮಹತ್ವ ನೀಡಿದ ಜನಪರ ಮತ್ತು ಅಭಿವೃದ್ದಿ ಪರ ಬಜೆಟ್ : ಸಿದ್ದು ದಾಖಲೆ ಬಜೆಟಿಗೆ ರಮಾನಾಥ ರೈ ಬಹುಪರಾಕ್ - Karavali Times ಕರಾವಳಿ ಅಭಿವೃದ್ದಿಗೆ ಮಹತ್ವ ನೀಡಿದ ಜನಪರ ಮತ್ತು ಅಭಿವೃದ್ದಿ ಪರ ಬಜೆಟ್ : ಸಿದ್ದು ದಾಖಲೆ ಬಜೆಟಿಗೆ ರಮಾನಾಥ ರೈ ಬಹುಪರಾಕ್ - Karavali Times

728x90

6 March 2026

ಕರಾವಳಿ ಅಭಿವೃದ್ದಿಗೆ ಮಹತ್ವ ನೀಡಿದ ಜನಪರ ಮತ್ತು ಅಭಿವೃದ್ದಿ ಪರ ಬಜೆಟ್ : ಸಿದ್ದು ದಾಖಲೆ ಬಜೆಟಿಗೆ ರಮಾನಾಥ ರೈ ಬಹುಪರಾಕ್

ಮಂಗಳೂರು, ಮಾರ್ಚ್ 06, 2026 (ಕರಾವಳಿ ಟೈಮ್ಸ್) : ಕರ್ನಾಟಕ ಸರ್ಕಾರ ಮಂಡಿಸಿದ ಇಂದಿನ ಬಜೆಟ್ ಜನಪರ ಮತ್ತು ಅಭಿವೃದ್ಧಿ ಪರವಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಬಣ್ಣಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಾರಿಗೆ ದಾಖಲೆಯಾಗಿ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಯಿಸಿದ ಅವರು, ರೈತರು, ಮಹಿಳೆಯರು, ಯುವಕರು ಹಾಗೂ ಮಧ್ಯಮ ವರ್ಗದ ಜನರಿಗೆ ನೀಡಿದ ಯೋಜನೆಗಳು ಸ್ವಾಗತಾರ್ಹವಾಗಿವೆ. ಜೊತೆಗೆ ಕರಾವಳಿ ಪ್ರದೇಶದ ಪ್ರವಾಸೋದ್ಯಮ, ಮೀನುಗಾರಿಕೆ, ಪೆÇಲೀಸ್ ಠಾಣೆಗಳ ಬಲವರ್ಧನೆ, ಕೃಷಿ, ಅರಣ್ಯ, ಆರೋಗ್ಯ, ಮುಜರಾಯಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ, ವಸತಿ, ಶಿಕ್ಷಣ ಕ್ಷೇತ್ರಕ್ಕೆ ಸೇರಿದಂತೆ ಎಲ್ಲಾ ವರ್ಗದ ಸಮುದಾಯದ ಕಲ್ಯಾಣಕ್ಕಾಗಿ ವಿಶೇಷ ಆದ್ಯತೆ ಸಂತಸ ಸಂಗತಿಯಾಗಿದೆ. ರಾಜ್ಯದ ಸಮಗ್ರ ಹಾಗೂ ಕರಾವಳಿ ಅಭಿವೃದ್ಧಿಗೆ ಈ ಬಜೆಟ್ ಮಹತ್ವದ ಹೆಜ್ಜೆಯಾಗಿದೆ ಎಂದವರು ಶ್ಲಾಘಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕರಾವಳಿ ಅಭಿವೃದ್ದಿಗೆ ಮಹತ್ವ ನೀಡಿದ ಜನಪರ ಮತ್ತು ಅಭಿವೃದ್ದಿ ಪರ ಬಜೆಟ್ : ಸಿದ್ದು ದಾಖಲೆ ಬಜೆಟಿಗೆ ರಮಾನಾಥ ರೈ ಬಹುಪರಾಕ್ Rating: 5 Reviewed By: karavali Times
Scroll to Top