ಬಂಟ್ವಾಳ, ಜುಲೈ 06, 2026 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಸಹಸವಾರ ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಪೊಳಲಿ ಸೇತುವೆಯಲ್ಲಿ ಜುಲೈ 5 ರಂದು ಬೆಳಿಗ್ಗೆ ಸಂಭವಿಸಿದೆ.
ಗಾಯಾಳು ಬೈಕ್ ಸವಾರರನ್ನು ಬೋಳಂತೂರು ನಿವಾಸಿ ಮೊಹಮ್ಮದ್ ಅನ್ಸಾಫ್ (22) ಹಾಗೂ ಸಹಸವಾರ ಮೊಹಮ್ಮದ್ ಸಂಶೀರ್ ಎಂದು ಹೆಸರಿಸಲಾಗಿದೆ. ಮೊಹಮ್ಮದ್ ಅನ್ಸಾಫ್ ಅವರ ಸವಾರರಾಗಿ ಹಾಗೂ ಸಂಶೀರ್ ಅವರು ಸಹಸವಾರರಾಗಿ ಬೈಕಿನಲ್ಲಿ ಜುಲೈ 5 ರಂದು ಪೊಳಲಿ ಕಡೆಗೆ ಸಂಚರಿಸುತ್ತಿದ್ದ ವೇಳೆ ಪೊಳಲಿ ಸೇತುವೆಗೆ ತಲುಪಿದಾಗ ಬಜ್ಪೆ ಕಡೆಯಿಂದ ಹರೀಶ್ ಆಚಾರ್ಯ ಅವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸವಾರ ಅನ್ಸಾಫ್ ರಸ್ತೆಗೆಸೆಯಲ್ಪಟ್ಟು, ಸಹಸವಾರ ಸಂಶೀರ್ ಅವರು ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಸೇರಿದ ಸ್ಥಳೀಯರು ಗಾಯಾಳುಗಳನ್ನು ಉಪಚರಿಸಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















0 comments:
Post a Comment