ಮಂಗಳೂರು : ಎಸ್.ಐ.ಆರ್. ಜಾಗೃತಿಗೆ ಬೈಕ್ ರ್ಯಾಲಿ - Karavali Times ಮಂಗಳೂರು : ಎಸ್.ಐ.ಆರ್. ಜಾಗೃತಿಗೆ ಬೈಕ್ ರ್ಯಾಲಿ - Karavali Times

728x90

18 July 2026

ಮಂಗಳೂರು : ಎಸ್.ಐ.ಆರ್. ಜಾಗೃತಿಗೆ ಬೈಕ್ ರ್ಯಾಲಿ

ಮಂಗಳೂರು, ಜುಲೈ 18, 2026 (ಕರಾವಳಿ ಟೈಮ್ಸ್) :  ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಸ್ವೀಪ್ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರಪಾಲಿಕೆ ಆಶ್ರಯದಲ್ಲಿ ವಿಶೇಷ ಜಾಗೃತಿ ಅಭಿಯಾನದ ಅಂಗವಾಗಿ ಬೃಹತ್ ಬೈಕ್ ರ್ಯಾಲಿ ಜುಲೈ 18 ರಂದು ನಡೆಯಿತು.

ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರ್ಯಾಲಿ ಆಯೋಜಿಸಲಾಗಿದ್ದು, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಲಾಲ್ ಬಾಗ್ ಮಂಗಳೂರು ಮಹಾನಗರಪಾಲಿಕೆ ಆವರಣದಿಂದ  ಪ್ರಾರಂಭಗೊಂಡ ಬೈಕ್ ರ್ಯಾಲಿ ಕದ್ರಿ ಉದ್ಯಾನವನದವರೆಗೆ ನಡೆಯಿತು.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಎಸ್.ಐ.ಆರ್. ಜಾಗೃತಿಗೆ ಬೈಕ್ ರ್ಯಾಲಿ Rating: 5 Reviewed By: karavali Times
Scroll to Top