ವೇಣೂರು, ಆಗಸ್ಟ್ 28, 2026 (ಕರಾವಳಿ ಟೈಮ್ಸ್) : ವೇಣೂರು ಪೆÇಲೀಸ್ ಠಾಣಾ ಪ್ರಕರಣದಲ್ಲಿ ಆರೋಪಿಯಾಗಿ, ಸುಮಾರು 13 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ ಶ್ರೀನಿವಾಸ್ ಕೆ ಅಲಿಯಾಸ್ ಶೀನಪ್ಪ ಅಲಿಯಾಸ್ ಶೀನ (43) ಎಂಬಾತನನ್ನು, ವೇಣೂರು ಠಾಣಾ ಸಿಬ್ಬಂದಿಗಳಾದ ಬೆನ್ನಿಚನ್, ಕೃಷ್ಣ, ಬಸವರಾಜ್ ಎಸ್ ಪಿ ಮತ್ತು ಮೋಹನ್ ಕುಮಾರ್ ಅವರುಗಳ ತಂಡ ವಿಜಯ ನಗರ ಜಿಲ್ಲೆಯ ಹರಪನಳ್ಳಿ ಕೊರಚರಟ್ಟಿ ಎಂಬಲ್ಲಿಂದ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
28 August 2026
- Blogger Comments
- Facebook Comments
Subscribe to:
Post Comments (Atom)





















0 comments:
Post a Comment