ಸಿಎಂ ಆರ್ಥಿಕ ಹಾಗೂ ಹಣಕಾಸು ಸಲಹೆಗಾರ ಅತೀಕ್ ಜೊತೆ ಮುಡಾ ಅಧ್ಯಕ್ಷರ ಸಭೆ - Karavali Times ಸಿಎಂ ಆರ್ಥಿಕ ಹಾಗೂ ಹಣಕಾಸು ಸಲಹೆಗಾರ ಅತೀಕ್ ಜೊತೆ ಮುಡಾ ಅಧ್ಯಕ್ಷರ ಸಭೆ - Karavali Times

728x90

19 September 2026

ಸಿಎಂ ಆರ್ಥಿಕ ಹಾಗೂ ಹಣಕಾಸು ಸಲಹೆಗಾರ ಅತೀಕ್ ಜೊತೆ ಮುಡಾ ಅಧ್ಯಕ್ಷರ ಸಭೆ

ಮಂಗಳೂರು, ಸೆಪ್ಟೆಂಬರ್ 20, 2026 (ಕರಾವಳಿ ಟೈಮ್ಸ್) : ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಯವರ ಆರ್ಥಿಕ ಹಾಗೂ ಹಣಕಾಸು ಸಲಹೆಗಾರ ಎಲ್.ಕೆ. ಅತೀಕ್ ಅವರ ಉಪಸ್ಥಿತಿಯಲ್ಲಿ ಮುಡಾದಲ್ಲಿ ಸೆ 19 ರಂದು ಸಭೆ ನಡೆಯಿತು.

ಮುಡಾ ಮಹಾ ಯೋಜನೆ ಕರಡು ಪ್ರತಿಗೆ ಸರಕಾರದಿಂದ ಅನುಮೋದನೆ ನೀಡುವ ಕುರಿತು ಚರ್ಚೆ ನಡೆಸಲಾಯಿತು. ಮಂಗಳೂರು ಐ ಯೋಜನೆಗೆ  ಕದ್ರಿ ಪಾರ್ಕ್ ಎದುರು 5 ಎಕರೆ ಜಾಗ ಮೀಸಲಿಡಲಾಗಿದೆ. ಈ ಯೋಜನೆ ಅನುಷ್ಠಾನದ ಕುರಿತು ಅತೀಕ್ ಅವರು ಮಾಹಿತಿ ಪಡೆದುಕೊಂಡರು.

ಬಟ್ಟಪ್ಪಾಡಿಯಿಂದ ಸಸಿಹಿತ್ಲುವರೆಗೆ ಕೋಸ್ಟಲ್ ರಸ್ತೆ ಅಭಿವೃದ್ಧಿ, ಸಿಆರ್‍ಐಡ್ ಸಮಸ್ಯೆ, ಅಭಿವೃದ್ಧಿ ಯೋಜನೆ, ಸಾಧಕ-ಬಾಧಕ ಕುರಿತು ಚರ್ಚೆ ನಡೆಸಲಾಯಿತು. ನಗರದ ವಿವಿಧ ಕಡೆಗಳಲ್ಲಿ ಅಂಡರ್ ಪಾಸ್ ನಿರ್ಮಾಣ, ಕೊಟ್ಟಾರ ಚೌಕಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವರೆಗೆ ಸ್ಮಾರ್ಟ್ ರಸ್ತೆ ನಿರ್ಮಾಣ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪಂಚಾಯತ್ ಸಿಇಒ ವಿನಾಯಕ ಕಾರ್ಬಾರಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್, ಮುಡಾ ಆಯುಕ್ತ ಅಬ್ದುಲ್ ನಜೀರ್, ಆರ್ಕಿಟೆಕ್ಟ್ ಸುಪ್ರಿತ್ ಆಳ್ವ, ಕ್ರೆಡಾಯ್. ಪ್ರವಾಸೋದ್ಯಮ, ಕೆಯುಐಡಿಎಫ್‍ಸಿ, ಸಿಆರ್‍ಝಡ್ ಇಲಾಖೆ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಸಿಎಂ ಆರ್ಥಿಕ ಹಾಗೂ ಹಣಕಾಸು ಸಲಹೆಗಾರ ಅತೀಕ್ ಜೊತೆ ಮುಡಾ ಅಧ್ಯಕ್ಷರ ಸಭೆ Rating: 5 Reviewed By: karavali Times
Scroll to Top