ಪುತ್ತೂರು : ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ ಆರೋಪಿ ಎಮಿಗ್ರೇಷನ್ ಅಧಿಕಾರಿಗಳ ಬಲೆಗೆ - Karavali Times ಪುತ್ತೂರು : ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ ಆರೋಪಿ ಎಮಿಗ್ರೇಷನ್ ಅಧಿಕಾರಿಗಳ ಬಲೆಗೆ - Karavali Times

728x90

30 October 2022

ಪುತ್ತೂರು : ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ ಆರೋಪಿ ಎಮಿಗ್ರೇಷನ್ ಅಧಿಕಾರಿಗಳ ಬಲೆಗೆ

ಪುತ್ತೂರು, ಅಕ್ಟೋಬರ್ 30, 2022 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 67/17 ಕಲಂ 324 504, 506 ಐಪಿಸಿ ಹಾಗೂ ಕಲಂ 3(1)(ಆರ್) ಎಸ್ ಸಿ ಎಸ್ ಟಿ ಆಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಎಸ್ ಪಿ ಎಲ್ ಸಂಖ್ಯೆ 179/2017 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಪುತ್ತೂರು ತಾಲೂಕು ನೆಟ್ಟಣಿಗೆಮುಡ್ನೂರು ಗ್ರಾಮದ ಬಸಿರಡ್ಕ ನಿವಾಸಿ ದಿವಂಗತ ಶ್ರೀನಿವಾಸ ಅವರ ಪುತ್ರ ಸಂದೇಶ್ ಕೆ ಎಸ್ (32) ಎಂಬಾತನನ್ನು ಅ 28 ರಂದು  ವಿದೇಶದಿಂದ ಬರುತ್ತಿದ್ದ ವೇಳೆ ಮುಂಬೈಯ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದಂತೆ ಅ 29 ರಂದು  12.30 ಗಂಟೆಗೆ ಮುಂಬೈಯ ಸಹರ್ ಪೆÇಲೀಸ್ ಠಾಣೆಯಿಂದ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣಾ ಎಚ್ ಸಿ ದಯಾನಂದ ಹಾಗೂ ಪಿ ಸಿ ಗಿರೀಶ್ ಅವರು ವಶಕ್ಕೆ ಪಡೆದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ ಆರೋಪಿ ಎಮಿಗ್ರೇಷನ್ ಅಧಿಕಾರಿಗಳ ಬಲೆಗೆ Rating: 5 Reviewed By: karavali Times
Scroll to Top