ಮಂಗಳಪದವು : ಜೀನಸು ಅಂಗಡಿಗೆ ನುಗ್ಗಿ ನಗದು ಲಪಟಾಯಿಸಿದ ಕಳ್ಳರು - Karavali Times ಮಂಗಳಪದವು : ಜೀನಸು ಅಂಗಡಿಗೆ ನುಗ್ಗಿ ನಗದು ಲಪಟಾಯಿಸಿದ ಕಳ್ಳರು - Karavali Times

728x90

2 October 2023

ಮಂಗಳಪದವು : ಜೀನಸು ಅಂಗಡಿಗೆ ನುಗ್ಗಿ ನಗದು ಲಪಟಾಯಿಸಿದ ಕಳ್ಳರು

ಬಂಟ್ವಾಳ, ಅಕ್ಟೋಬರ್ 02, 2023 (ಕರಾವಳಿ ಟೈಮ್ಸ್) : ಜಿನಸು ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 80 ಸಾವಿರ ರೂಪಾಯಿ ನಗದು ಕಳವುಗೈದ ಘಟನೆ ತಾಲೂಕಿನ ವೀರಕಂಭ ಗ್ರಾಮದ ಮಂಗಳಪದವು ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. 

ವಿಟ್ಲ ಪಡ್ನೂರು ಗ್ರಾಮದ ನಿವಾಸಿ ಅಬ್ದುಲ್ ಸಲಾಂ (37) ಎಂಬವರಿಗೆ ಸೇರಿದ ಜೀನಸು ಅಂಗಡಿಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಸೆ 30 ರ ಶನಿವಾರ ರಾತ್ರಿಯಿಂದ ಅ 1 ರ ಭಾನುವಾರ ಬೆಳಗ್ಗಿನ ಮಧ್ಯದ ಅವಧಿಯಲ್ಲಿ ಕೃತ್ಯ ನಡೆದಿದೆ. ಅಂಗಡಿಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ಅಂಗಡಿಯಲ್ಲಿದ್ದ 80 ಸಾವಿರ ರೂಪಾಯಿ ಕಳ್ಳತನ ಮಾಡಿರುವುದಾಗಿ ಸಲಾಂ ಅವರು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 174/2023 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಹುಡುಕಾಟ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳಪದವು : ಜೀನಸು ಅಂಗಡಿಗೆ ನುಗ್ಗಿ ನಗದು ಲಪಟಾಯಿಸಿದ ಕಳ್ಳರು Rating: 5 Reviewed By: karavali Times
Scroll to Top