ಜಕ್ರಿಬೆಟ್ಟು : ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯ ಪಾದದ ಮೇಲೆ ಕಾರು ಹರಿದು ಗಾಯ - Karavali Times ಜಕ್ರಿಬೆಟ್ಟು : ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯ ಪಾದದ ಮೇಲೆ ಕಾರು ಹರಿದು ಗಾಯ - Karavali Times

728x90

21 April 2025

ಜಕ್ರಿಬೆಟ್ಟು : ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯ ಪಾದದ ಮೇಲೆ ಕಾರು ಹರಿದು ಗಾಯ

ಬಂಟ್ವಾಳ, ಎಪ್ರಿಲ್ 21, 2025 (ಕರಾವಳಿ ಟೈಮ್ಸ್) : ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ ವ್ಯಕ್ತಿಯ ಕಾಲಿನ ಪಾದದ ಮೇಲೆ ಕಾರು ಹರಿದು ಗಾಯಗೊಂಡ ಘಟನೆ ಜಕ್ರಿಬೆಟ್ಟು ಬಳಿಯ ಭಾಮಿ ಜಂಕ್ಷನ್ ಸಮೀಪದ ಶನಿವಾರ ಸಂಭವಿಸಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗಾಯಗೊಂಡ ವ್ಯಕ್ತಿಯನ್ನು ಪಂಜಿಕಲ್ಲು ಗ್ರಾಮದ ನಿವಾಸಿ ಜಯರಾಮ ಪೂಜಾರಿ ಎಂದು ಹೆಸರಿಸಲಾಗಿದೆ. ಇವರು ತಮ್ಮ ಹೆಂಡತಿ ಮಕ್ಕಳೊಂದಿಗೆ ಶನಿವಾರ ರಾತ್ರಿ 8.20ರ ವೇಳೆಗೆ ಬಂಟ್ವಾಳ ಕಸಬಾ ಗ್ರಾಮದ  ಬಂಟ್ವಾಳ ಪೇಟೆಯ ಆರ್ ಕೆ ಸ್ಟೋರ್ ಎದುರು ಭಾಮಿ ಜಂಕ್ಷನ್-ಜಕ್ರಿಬೆಟ್ಟು ರಸ್ತೆಯ ಬಳಿ ರಸ್ತೆ ದಾಟಲು ನಿಂತಿದ್ದಾಗ ಬಾಮಿ ಜಂಕ್ಷನ್ ಕಡೆಯಿಂದ ಬಂದ ಕಾರು ಚಾಲಕ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದ ಪರಿಣಾಮ ಅವರ ಬಲ ಕಾಲಿನ ಪಾದದ ಮೇಲೆ ಕಾರು ಹರಿದು ಈ ಅಪಘಾತ ಸಂಭವಿಸಿದೆ. 

ಘಟನೆಯಿಂದ ಗಾಯಗೊಂಡ ಜಯರಾಮ ಅವರನ್ನು ತಕ್ಷಣ ಸ್ಥಳೀಯರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಸೋಮಯಾಜಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜಕ್ರಿಬೆಟ್ಟು : ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯ ಪಾದದ ಮೇಲೆ ಕಾರು ಹರಿದು ಗಾಯ Rating: 5 Reviewed By: karavali Times
Scroll to Top