ಮೈಸೂರು, ಎಪ್ರಿಲ್ 21, 2025 (ಕರಾವಳಿ ಟೈಮ್ಸ್) : ಇಲ್ಲಿನ ಗೌಸಿಯಾ ನಗರ ನಿವಾಸಿ ಸೂಫಿ ಖ್ವಾಜಾ ಅಝೀಂ ಅಲಿ ಷಾ ಚಿಶ್ತಿ ಯಾನೆ ಮೌಲಾ ತಮೀಂ ಅವರ ಪುತ್ರ ಇರ್ಫಾನ್ ಚಿಶ್ತಿ ಅವರ ವಿವಾಹ ಕಾರ್ಯಕ್ರಮವು ಗೌಸಿಯಾ ನಗರ ನಿವಾಸಿ ಸಯ್ಯದ್ ಝಮೀರ್ ಸಾಹೇಬ್ ಅವರ ಪುತ್ರಿ ರಹೀನ್ ಬಾನು ಎಂಬ ವಧುವಿನೊಂದಿಗೆ ಎಪ್ರಿಲ್ 21 ರಂದು ಸೋಮವಾರ ಮೈಸೂರು-ಎಂ ಆರ್ ಮೊಹಲ್ಲಾ ಇಲ್ಲಿನ ಶಾಲಿಮಾರ್ ಫಂಕ್ಷನ್ ಹಾಲ್ ಸಭಾಂಗಣದಲ್ಲಿ ನೆರವೇರಿತು.
ಮೈಸೂರ್ ಜಿಲ್ಲಾ ಖಾಝಿ ಹಝ್ರತ್ ಮೌಲಾನಾ ಮುಹಮ್ಮದ್ ಉಸ್ಮಾನ್ ಶರೀಫ್ ಅವರು ನಿಖಾಹ ನೆರವೇರಿಸಿದರು. ಪ್ರವಾದಿ ಕುಟುಂಬಸ್ಥರಾದ ತಜ್ಜು ಸೂಫಿಯಾ ಖತೀಬುಲ್ ಹಿಂದ್ ಬೆಹ್ರುಲ್ ಉಲೂಂ ಹಝ್ರತ್ ಡಾ ಖಾಲಿದ್ ಜೀಲಾನಿ ಅಲ್ ವಶೀಲಿ ಕೆಸರ್ ಮೊಡು ತುಮಕೂರು, ಖ್ವಾಜಾ ಬಲ್ಹರ್ ಅಲಿ ಶಾ ಚಿಶ್ತಿ ಬಣ್ವ, ಉಲಮಾಗಳು, ಮಶಾಹಿಕ್ಗಳು ಸಹಿತ ಹಲವು ಮಂದಿ ಗಣ್ಯರು, ಹಿತೈಷಿಗಳು, ಬಂಧು-ಮಿತ್ರರು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.
0 comments:
Post a Comment