ಶಾಸಕರ ವಿಷಾದ ಹಾಗೂ ವಿಪಕ್ಷ ನಾಯಕರ ಮನವಿಗೆ ಮನ್ನಣೆ ಕಲ್ಪಿಸಿದ ಸ್ಪೀಕರ್ ಖಾದರ್ : 18 ಮಂದಿ ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್ ಪಡೆದ ವಿಧಾನಸಭಾಧ್ಯಕ್ಷ, ಸಿಎಂ ಸಹಿತ ಪ್ರಮುಖರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಹತ್ವದ ನಿರ್ಧಾರ, ಹಜ್ ಯಾತ್ರೆಗೆ ತೆರಳುವ ತಾಸುಗಳ ಮುಂಚೆ ಜವಾಬ್ದಾರಿ ಮುಗಿಸಿದ ಯು.ಟಿ. ಖಾದರ್ ಫರೀದ್ - Karavali Times ಶಾಸಕರ ವಿಷಾದ ಹಾಗೂ ವಿಪಕ್ಷ ನಾಯಕರ ಮನವಿಗೆ ಮನ್ನಣೆ ಕಲ್ಪಿಸಿದ ಸ್ಪೀಕರ್ ಖಾದರ್ : 18 ಮಂದಿ ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್ ಪಡೆದ ವಿಧಾನಸಭಾಧ್ಯಕ್ಷ, ಸಿಎಂ ಸಹಿತ ಪ್ರಮುಖರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಹತ್ವದ ನಿರ್ಧಾರ, ಹಜ್ ಯಾತ್ರೆಗೆ ತೆರಳುವ ತಾಸುಗಳ ಮುಂಚೆ ಜವಾಬ್ದಾರಿ ಮುಗಿಸಿದ ಯು.ಟಿ. ಖಾದರ್ ಫರೀದ್ - Karavali Times

728x90

25 May 2025

ಶಾಸಕರ ವಿಷಾದ ಹಾಗೂ ವಿಪಕ್ಷ ನಾಯಕರ ಮನವಿಗೆ ಮನ್ನಣೆ ಕಲ್ಪಿಸಿದ ಸ್ಪೀಕರ್ ಖಾದರ್ : 18 ಮಂದಿ ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್ ಪಡೆದ ವಿಧಾನಸಭಾಧ್ಯಕ್ಷ, ಸಿಎಂ ಸಹಿತ ಪ್ರಮುಖರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಹತ್ವದ ನಿರ್ಧಾರ, ಹಜ್ ಯಾತ್ರೆಗೆ ತೆರಳುವ ತಾಸುಗಳ ಮುಂಚೆ ಜವಾಬ್ದಾರಿ ಮುಗಿಸಿದ ಯು.ಟಿ. ಖಾದರ್ ಫರೀದ್

ಬೆಂಗಳೂರು, ಮೇ 25, 2025 (ಕರಾವಳಿ ಟೈಮ್ಸ್) : 6 ತಿಂಗಳ ಕಾಲ ಅಮಾನತುಗೊಂಡಿದ್ದ ಬಿಜೆಪಿಯ 18 ಮಂದಿ ಶಾಸಕರ ಅಮಾನತು ಆದೇಶವನ್ನು ಸ್ಪೀಕರ್ ಯು ಟಿ ಖಾದರ್ ಅವರು ಭಾನುವಾರ ವಾಪಾಸು ಪಡೆದಿದ್ದಾರೆ. 

ಅಮಾನತುಗೊಂಡ ಶಾಸಕರು ವಿಷಾದ ವ್ಯಕ್ತಪಡಿಸಿದ್ದುದಲ್ಲದೆ ವಿಪಕ್ಷ ನಾಯಕರು ಕೂಡಾ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಭಾನುವಾರ ಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಸ್ಪೀಕರ್ ಖಾದರ್ ಅವರು ತಮ್ಮ ಅಮಾನತು ಆದೇಶ ವಾಪಾಸು ಪಡೆಯುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. 

ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಸಿದ ಮತ್ತು ಮಸೂದೆಯ ಪ್ರತಿಗಳನ್ನು ಹರಿದು ಅವರ ಮೇಲೆ ಎಸೆದ ಆರೋಪದ ಮೇಲೆ 18 ಮಂದಿ ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಇದೀಗ ಬಿಜೆಪಿ ಶಾಸಕ ಅಮಾನತು ಆದೇಶವನ್ನು ಹಿಂಪಡೆಯಲು ಭಾನುವಾರ ನಡೆದ ಸಂಧಾನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 

ಶಾಸಕರ ಅಮಾನತು ಆದೇಶವನ್ನ ಹಿಂಪಡೆಯಲಾಗಿದೆ. ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಕೂಡ ನನಗೆ ಮನವಿ ಸಲ್ಲಿಸಿದ್ದರು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. 18 ಶಾಸಕರನ್ನು ಅಮಾನತು ಮಾಡಿ ಎರಡು ತಿಂಗಳಾಗಿದೆ. ಈಗ ಸಂತೋಷದಿಂದ ಶಾಸಕರ ಅಮಾಮತು ಹಿಂಪಡೆದಿದ್ದೇನೆ. ಯಾವುದೇ ಷರತ್ತು ಇಲ್ಲ, ಎಲ್ಲರೂ ನಮ್ಮ ಮಿತ್ರರು. ಆ ಸಮಯದಲ್ಲಿ ದುರ್ನಡತೆ ತೋರಿದ್ದಕ್ಕೆ ಕ್ರಮಕೈಗೊಂಡಿದ್ದೆ. ಕ್ರಮ ತೆಗೆದುಕೊಳ್ಳುವುದಕ್ಕೆ ನನಗೆ ಅಧಿಕಾರವಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಯಿಸಿದ್ದಾರೆ. 

ಸ್ಪೀಕರ್ ಯು ಟಿ ಖಾದರ್ ಫರೀದ್ ಅವರು ಸಹೋದರ ಡಾ ಯು ಟಿ ಇಫ್ತಿಕಾರ್ ಅಲಿ ಅವರ ಜೊತೆಗೂಡಿ ಇನ್ನೇನು ಕೆಲವೇ ತಾಸುಗಳಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಅವರು ಈ ಒಂದು ಜವಾಬ್ದಾರಿಯನ್ನು ಮುಗಿಸಿ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಇಸ್ಲಾಮಿನ ನಿಯಮದಂತೆ ಪವಿತ್ರವೂ ಪರಮ ಪಾವನವೂ ಆಗಿರುವ ಯಾತ್ರೆಯಾಗಿರುವ ಹಜ್ ಯಾತ್ರೆಗೆ ತೆರಳುವ ಮುನ್ನ ಯಾವುದೇ ಜವಾಬ್ದಾರಿಗಳನ್ನು ಉಳಿಸಿಕೊಳ್ಳದೆ ಎಲ್ಲವನ್ನೂ ತಾತ್ಕಾಲಿಕವಾಗಿ ಮುಗಿಸಿ ಹೊರಡಬೇಕೆನ್ನುವ ಪ್ರತೀತಿ ಇದೆ. ಬಳಿಕ ಪವಿತ್ರ ಹಜ್ ಯಾತ್ರೆಯಿಂದ ಮರಳಿದ ಬಳಿಕ ಮುಂದಿನ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ವಾಡಿಕೆ. ಅದರಂತೆ ಸ್ಪೀಕರ್ ಯು ಟಿ ಖಾದರ್ ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಭಾನುವಾರ ನಡೆದ ಸಂಧಾನ ಸಭೆ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಕಾನೂನು ಸಚಿವ ಎಚ್.ಕೆ. ಪಾಟೀಲ್ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಶಾಸಕರ ವಿಷಾದ ಹಾಗೂ ವಿಪಕ್ಷ ನಾಯಕರ ಮನವಿಗೆ ಮನ್ನಣೆ ಕಲ್ಪಿಸಿದ ಸ್ಪೀಕರ್ ಖಾದರ್ : 18 ಮಂದಿ ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್ ಪಡೆದ ವಿಧಾನಸಭಾಧ್ಯಕ್ಷ, ಸಿಎಂ ಸಹಿತ ಪ್ರಮುಖರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಹತ್ವದ ನಿರ್ಧಾರ, ಹಜ್ ಯಾತ್ರೆಗೆ ತೆರಳುವ ತಾಸುಗಳ ಮುಂಚೆ ಜವಾಬ್ದಾರಿ ಮುಗಿಸಿದ ಯು.ಟಿ. ಖಾದರ್ ಫರೀದ್ Rating: 5 Reviewed By: karavali Times
Scroll to Top