ಬಂಟ್ವಾಳ, ಮೇ 25, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ 2ನೇ ವಾರ್ಡಿನ ಅರಬ್ಬಿಗುಡ್ಡೆ ಎಂಬಲ್ಲಿ ಸುಪ್ರಿಯಾ ಎಂಬವರ ಮನೆ ಸಮೀಪದ ತಡೆಗೋಡೆ ಭಾರೀ ಮಳೆಯ ಕಾರಣ ಭಾನುವಾರ ಕುಸಿದು ಬಿದ್ದಿದ್ದು, ಕೆಳಗಿನ ಮನೆ ಮೇಲೆ ಬಿದ್ದಿದೆ. ಸುಪ್ರಿಯಾ ಅವರ ಮನೆಯೂ ಕುಸಿತದ ಭೀತಿ ಎದುರಿಸುತ್ತಿದೆ.
ಘಟನಾ ಸ್ಥಳಕ್ಕೆ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಹಾಗೂ ಸ್ಥಳೀಯ ಕೌನ್ಸಿಲರ್ ಪುರುಷೋತ್ತಮ ಬಂಗೇರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸರಕಾರದ ಪ್ರಾಕೃತಿಕ ವಿಕೋಪ ಪರಿಹಾರ ಒದಗಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
0 comments:
Post a Comment