ಉಪ್ಪಿನಂಗಡಿ, ಮೇ 05, 2025 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರ ಸಾಗಾಟ ಬೇಧಿಸಿದ ಉಪ್ಪಿನಂಗಡಿ ಪೊಲೀಸರು ಟೆಂಪೋ ಸಹಿತ ಚಾಲಕನನ್ನು ವಶಕ್ಕೆ ಪಡೆದುಕೊಂಡ ಘಟನೆ ಉರುವಾಲು ಗ್ರಾಮದ ಕುಪ್ಪೆಟ್ಟಿ ಎಂಬಲ್ಲಿ ಭಾನುವಾರ ನಡೆದಿದೆ. ಬಂಧಿತ ಟೆಂಪೋ ಚಾಲಕನನ್ನು ಬೆಳ್ತಂಗಡಿ ತಾಲೂಕು, ಬಂದಾರು ಗ್ರಾಮದ ಬೈಪಾಡಿ-ಕೋಡಿಮಜಲು ನಿವಾಸಿ ಜಯಂತ ಗೌಡ (39) ಎಂದು ಹೆಸರಿಸಲಾಗಿದ.
ಭಾನುವಾರ ಬೆಳಿಗ್ಗೆ ಉಪ್ಪಿನಂಗಡಿ ಠಾಣಾ ಪಿಎಸ್ಸೈ ಅವಿನಾಶ್ ಎಚ್ ಅವರ ನೇತೃತ್ವದ ಪೊಲೀಸರು ಉರುವಾಲು ಗ್ರಾಮದ ಕುಪ್ಪೆಟ್ಟಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಣಿಯೂರು-ಪದ್ಮುಂಜ ಕಡೆಯಿಂದ ಸಾಗಿ ಬಂದ ಅಶೋಕ್ ಲೈಲಾಂಡ್ ಟೆಂಪೋ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಟೆಂಪೋದಲ್ಲಿ ಒಂದು ಹಸು ಹಾಗೂ ಮೂರು ಕರುಗಳು ಕಂಡು ಬಂದಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಜಯಂತ ಗೌಡ ಎಂಬಾತನನ್ನು ಪೊಲೀಸರು ವಿಚಾರಿಸಿದಾಗ ಜಾನುವಾರುಗಳನ್ನು ಕುಪ್ಪೆಟ್ಟಿಯ ಬದ್ರು ಎಂಬಾತ ಮತ್ತು ತಾನು ಮಾಂಸ ಮಾಡುವ ಉದ್ದೇಶದಿಂದ ನೋಡಿ ಪರಿಚಯ ಇರುವ ಉಜಿರೆ ಗ್ರಾಮದ ಮಾಚಾರ್ ಎಂಬಲ್ಲಿಂದ ಖರೀದಿ ಮಾಡಿ ಟೆಂಪೆÇೀದಲ್ಲಿ ತುಂಬಿಸಿ ಕಡಿದು ಮಾಂಸ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಆರೋಪಿಯ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment