ಅಕ್ಕರಂಗಡಿ : ಪೈಂಟರ್ ಕಾರ್ಮಿಕನಿಗೆ ಚೂರಿ ಇರಿದು ಪರಾರಿ, ಕೈಗೆ ಗಂಭೀರ ಗಾಯ - Karavali Times ಅಕ್ಕರಂಗಡಿ : ಪೈಂಟರ್ ಕಾರ್ಮಿಕನಿಗೆ ಚೂರಿ ಇರಿದು ಪರಾರಿ, ಕೈಗೆ ಗಂಭೀರ ಗಾಯ - Karavali Times

728x90

16 May 2025

ಅಕ್ಕರಂಗಡಿ : ಪೈಂಟರ್ ಕಾರ್ಮಿಕನಿಗೆ ಚೂರಿ ಇರಿದು ಪರಾರಿ, ಕೈಗೆ ಗಂಭೀರ ಗಾಯ

ಬಂಟ್ವಾಳ, ಮೇ 17, 2025 (ಕರಾವಳಿ ಟೈಮ್ಸ್) : ವ್ಯಕ್ತಿಯೋರ್ವರಿಗೆ ದ್ವಿಚಕ್ರ ವಾಹನದಲ್ಲಿ ಬಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ಸು ನಿಲ್ದಾಣ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ದಾಳಿಗೊಳಗಾದವರನ್ನು ಸ್ಥಳೀಯ ನಿವಾಸಿ, ಪೈಂಟರ್ ಕಾರ್ಮಿಕ ವೃತ್ತಿಯ ಹಮೀದ್ ಯಾನೆ ಅಮ್ಮಿ ಎಂದು ಹೆಸರಿಸಲಾಗಿದೆ. 

ಇರಿತದಿಂದ ಹಮೀದ್ ಅವರ ಕೈಗೆ ಆಳವಾದ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೆÇಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೆÇಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಪೊಲೀಸ್ ತನಿಖೆಯ ಬಳಿಕವಷ್ಟೆ ಗೊತ್ತಾಗಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ಕರಂಗಡಿ : ಪೈಂಟರ್ ಕಾರ್ಮಿಕನಿಗೆ ಚೂರಿ ಇರಿದು ಪರಾರಿ, ಕೈಗೆ ಗಂಭೀರ ಗಾಯ Rating: 5 Reviewed By: karavali Times
Scroll to Top