ಬಂಟ್ವಾಳ, ಮೇ 17, 2025 (ಕರಾವಳಿ ಟೈಮ್ಸ್) : ಪುತ್ತೂರು ತಾಲೂಕಿನ ಕಬಕದಲ್ಲಿ ಮೊನ್ನೆ ನಡೆದ ಸರಕಾರಿ ಬಸ್ ಡಿಕ್ಕಿ ಹೊಡೆದು ಮರಣ ಹೊಂದಿದ ನರಿಕೊಂಬು ಗ್ರಾ ಪಂ ಸದಸ್ಯ ಅರುಣ್ ಬೋರುಗುಡ್ಡೆ ಅವರ ಮನೆಗೆ ಬಂಟ್ವಾಳ ಶಾಸಕ ಯು ರಾಜೇಶ್ ನ್ಯಾಕ್ ಅವರು ಶನಿವಾರ ಭೇಟಿ ನೀಡಿ ಮೃತರ ಪತ್ನಿ, ತಾಯಿ ಮತ್ತು ಮಗನಿಗೆ ಸಾಂತ್ವನ ಹೇಳಿದರು.
ದಿವಂಗತ ಅರುಣ್ ಬೋರುಗುಡ್ಡೆ ಅವರ ಪುತ್ರನ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸುವುದಾಗಿ ಶಾಸಕರು ಭರವಸೆ ನೀಡಿದರು.
0 comments:
Post a Comment