ದೇರಾಜೆ ಘಟನೆ ಬಗ್ಗೆ ವದಂತಿ ಹರಡಿದ ವಾಟ್ಸಪ್ ಖಾತೆದಾರನ ವಿರುದ್ದ ಹಾಗೂ ಸುದ್ದಿ ವೈರಲ್ ಮಾಡಿ ಜನ ಸೇರಿಸಿದ ವ್ಯಕ್ತಿಯ ವಿರುದ್ದ ಎಫ್.ಐ.ಆರ್. ದಾಖಲು - Karavali Times ದೇರಾಜೆ ಘಟನೆ ಬಗ್ಗೆ ವದಂತಿ ಹರಡಿದ ವಾಟ್ಸಪ್ ಖಾತೆದಾರನ ವಿರುದ್ದ ಹಾಗೂ ಸುದ್ದಿ ವೈರಲ್ ಮಾಡಿ ಜನ ಸೇರಿಸಿದ ವ್ಯಕ್ತಿಯ ವಿರುದ್ದ ಎಫ್.ಐ.ಆರ್. ದಾಖಲು - Karavali Times

728x90

22 June 2025

ದೇರಾಜೆ ಘಟನೆ ಬಗ್ಗೆ ವದಂತಿ ಹರಡಿದ ವಾಟ್ಸಪ್ ಖಾತೆದಾರನ ವಿರುದ್ದ ಹಾಗೂ ಸುದ್ದಿ ವೈರಲ್ ಮಾಡಿ ಜನ ಸೇರಿಸಿದ ವ್ಯಕ್ತಿಯ ವಿರುದ್ದ ಎಫ್.ಐ.ಆರ್. ದಾಖಲು

 ಬಂಟ್ವಾಳ, ಜೂನ್ 22, 2025 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪನಡು ಗ್ರಾಮದ ದೇರಾಜೆ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದ ಗೊಂದಲದ ವಾತಾವರಣಕ್ಕೆ ತುಪ್ಪ ಸುರಿದ ಆರೋಪದಲ್ಲಿ ವಾಟ್ಸಪ್ ಖಾತೆದಾರನ ಹಾಗೂ ಸುದ್ದಿ ವೈರಲ್ ಮಾಡಿ ಜನ ಸೇರಿಸಿದ ವ್ಯಕ್ತಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

 ಘಟನೆಗೆ ಸಂಬಂಧಿಸಿದಂತೆ, "ಮುಸ್ಲಿಂ ಯುವ ಬಳಗ" ಎಂಬ ಹೆಸರಿನ ವಾಟ್ಸಾಪ್ ಗ್ರೂಪಿನಲ್ಲಿ ಝಿಯಾದ್ ಉಮ್ಮಿ ಎಂಬ ಹೆಸರಿನ ವ್ಯಕ್ತಿಯೋರ್ವ  “ಸಜಿಪ ದೇರಾಜೆ ರಸ್ತೆಯ ಮಧ್ಯೆ ಯುವಕರಿಬ್ಬರ ಮೇಲೆ ದಾಳಿಗೆ ಯತ್ನ, ಘಟನಾ ಸ್ಥಳದಲ್ಲಿ ಸೇರಿದ ಜನರಿಂದ ಆಕ್ರೋಶ” ಎಂಬುದಾಗಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ ಸಾರ್ವಜನಿಕರಿಗೆ ಭಯ ಬೀತಿಯನ್ನುಂಟು ಮಾಡಿದ ಹಿನ್ನೆಲೆಯಲ್ಲಿ, ಝಿಯಾದ್ ಉಮ್ಮಿ ಎಂಬ ಹೆಸರಿನಲ್ಲಿ ಸಂದೇಶ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2025, ಕಲಂ  240 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ, “ತಲವಾರು ದಾಳಿ” ಎಂಬುದಾಗಿ ಸೋಶಿಯಲ್ ಮಿಡಿಯಾದಲ್ಲಿ  ಸುಳ್ಳು ಸುದ್ದಿ ಹಬ್ಬಿಸಿ, ದೇರಾಜೆ ಬಸ್ಸು ನಿಲ್ದಾಣದ ಬಳಿ ಸುಮಾರು 50 ರಿಂದ 75 ಜನರ  ಅಕ್ರಮ ಕೂಟವನ್ನು ಸೇರಿಸಿ, ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡಿದ ವ್ಯಕ್ತಿಯ ವಿರುದ್ದವೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2025 ಕಲಂ 240, 285, 189(2), 191(2), 190 ಬಿ ಎನ್ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ದೇರಾಜೆ ಘಟನೆ ಬಗ್ಗೆ ವದಂತಿ ಹರಡಿದ ವಾಟ್ಸಪ್ ಖಾತೆದಾರನ ವಿರುದ್ದ ಹಾಗೂ ಸುದ್ದಿ ವೈರಲ್ ಮಾಡಿ ಜನ ಸೇರಿಸಿದ ವ್ಯಕ್ತಿಯ ವಿರುದ್ದ ಎಫ್.ಐ.ಆರ್. ದಾಖಲು Rating: 5 Reviewed By: lk
Scroll to Top