ಕಡಬ : ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ಯುವಕ ಆಕಸ್ಮಿಕವಾಗಿ ಮುಳುಗಿ ಸಾವು - Karavali Times ಕಡಬ : ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ಯುವಕ ಆಕಸ್ಮಿಕವಾಗಿ ಮುಳುಗಿ ಸಾವು - Karavali Times

728x90

9 June 2025

ಕಡಬ : ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ಯುವಕ ಆಕಸ್ಮಿಕವಾಗಿ ಮುಳುಗಿ ಸಾವು

 ಕಡಬ, ಜೂನ್ 09, 2025 (ಕರಾವಳಿ ಟೈಮ್ಸ್) : ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ಯುವಕ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನೂಜಿಬಾಳ್ತಿಲ ಗ್ರಾಮದ ಇಚ್ಲಂಪಾಡಿ ಸೇತುವೆ ಬಳಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. 

ಮೃತ ಯುವಕನನ್ನು ಇಚ್ಲಂಪಾಡಿ ಗಾಮದ ಕೆಡೆಂಬೇಲು ನಿವಾಸಿ ಜಯಾನಂದ ಅವರ ಪುತ್ರ, ಮಂಗಳೂರಿನಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ (ಮೆಡಿಕಲ್ ರೆಪ್) ಕೆಲಸ ಮಾಡುತ್ತಿದ್ದ ಚೇತನ್ ಶೆಟ್ಟಿ (21) ಎಂದು ಹೆಸರಿಸಲಾಗಿದೆ. ಈತ ಭಾನುವಾರ ರಜಾದಿನವಾದುದರಿಂದ ಮನೆಯಲ್ಲಿದ್ದವನು ಬೆಳಿಗ್ಗೆ 8 ಗಂಟೆಗೆ ಕ್ರಿಕೆಟ್ ಆಡಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ. ಮಧ್ಯಾಹ್ನ ಸುಮಾರು 1.30 ಗಂಟೆ ವೇಳೆ ಜಯಾನಂದ ಅವರ ಸಂಬಂಧಿ ದುರ್ಗಾಪ್ರಸಾದ್ ಎಂಬವರು ಚೇತನ್ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ. 

ಚೇತನ್ ಇಚ್ಲಂಪಾಡಿಯ ಸೇತುವೆ ಬಳಿ ನೂಜಿಬಾಳ್ತಿಲ ಗ್ರಾಮದ ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆ ಇಳಿದವನು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿ ಹೇಳಲಾಗಿದೆ. ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡಬ : ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ಯುವಕ ಆಕಸ್ಮಿಕವಾಗಿ ಮುಳುಗಿ ಸಾವು Rating: 5 Reviewed By: karavali Times
Scroll to Top