ಬಡಗಕಜೆಕಾರು : ಕೈಸಾಲ ವಾಪಾಸು ನೀಡಲು ಹಣ ಇಲ್ಲದ್ದಕ್ಕೆ ನೊಂದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ - Karavali Times ಬಡಗಕಜೆಕಾರು : ಕೈಸಾಲ ವಾಪಾಸು ನೀಡಲು ಹಣ ಇಲ್ಲದ್ದಕ್ಕೆ ನೊಂದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ - Karavali Times

728x90

26 June 2025

ಬಡಗಕಜೆಕಾರು : ಕೈಸಾಲ ವಾಪಾಸು ನೀಡಲು ಹಣ ಇಲ್ಲದ್ದಕ್ಕೆ ನೊಂದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ

ಬಂಟ್ವಾಳ, ಜೂನ್ 26, 2022 (ಕರಾವಳಿ ಟೈಮ್ಸ್) : ಕೈಸಾಲ ಪಡೆದ ಹಣವನ್ನು ವಾಪಾಸು ನೀಡಲು ಆಗದೆ ಇರುವ ಬಗ್ಗೆ ಮನನೊಂದು ವ್ಯಕ್ತಿಯೋರ್ವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಕಜೆಕಾರು ಗ್ರಾಮದಲ್ಲಿ ಸಂಭವಿಸಿದೆ. 

ಮೃತರನ್ನು ಇಲ್ಲಿನ ನಿವಾಸಿ ಪುಷ್ಪರಾಜ್ (45) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪತ್ನಿ ಮೀನಾಕ್ಷಿ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಪತಿ ಪುಷ್ಪರಾಜ್ ಅವರು ಅಡಿಕೆ ಸುಲಿಯುವ ಕೆಲಸ ಮಾಡಿಕೊಂಡಿರುತ್ತಾರೆ. ಅವರಿಗೆ ಮೊದಲಿನಿಂದಲು ಕಾಲು ನೋವು ಇದ್ದು, ಅಲ್ಲದೇ ಇತ್ತೀಚೆಗೆ ಸುಮಾರು  ಒಂದು ತಿಂಗಳ ಹಿಂದೆ ಯಾವುದೇ ಕೆಲಸವಿಲ್ಲದೇ ಕೈಸಾಲ ಮಾಡಿದ ಹಣವನ್ನು ಕೊಡಲು ಆಗದೇ ಇರುವ ಬಗ್ಗೆ ಆಗಾಗ ಹೇಳಿಕೊಳ್ಳುತ್ತಿದ್ದರು. 

ಮಂಗಳವಾರ ಇವರು ಮನೆಯ ಮುಂದೆ ರಸ್ತೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಹೊರಳಾಡುತ್ತಿದ್ದು, ತಕ್ಷಣ ಅವರನ್ನು  ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ನೀಡಿರುವ ದೂರಿನ ಮೇರೆಗೆ ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಬಡಗಕಜೆಕಾರು : ಕೈಸಾಲ ವಾಪಾಸು ನೀಡಲು ಹಣ ಇಲ್ಲದ್ದಕ್ಕೆ ನೊಂದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ Rating: 5 Reviewed By: karavali Times
Scroll to Top