ಬಂಟ್ವಾಳದಲ್ಲಿ ಮಳೆ ಅಬ್ಬರ ತಗ್ಗಿದರೂ ಮುಂದುವರಿದ ಮಳೆ ಹಾನಿ ಪ್ರಕರಣಗಳು - Karavali Times ಬಂಟ್ವಾಳದಲ್ಲಿ ಮಳೆ ಅಬ್ಬರ ತಗ್ಗಿದರೂ ಮುಂದುವರಿದ ಮಳೆ ಹಾನಿ ಪ್ರಕರಣಗಳು - Karavali Times

728x90

28 July 2025

ಬಂಟ್ವಾಳದಲ್ಲಿ ಮಳೆ ಅಬ್ಬರ ತಗ್ಗಿದರೂ ಮುಂದುವರಿದ ಮಳೆ ಹಾನಿ ಪ್ರಕರಣಗಳು

ಬಂಟ್ವಾಳ, ಜುಲೈ 28, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಸೋಮವಾರ ಮಳೆ ಅಬ್ಬರ ಕಡಿಮೆಯಾದರೂ ಮಳೆ ಹಾನಿ ಪ್ರಕರಣಗಳು ಮುಂದುವರಿದಿದೆ. ನರಿಕೊಂಬು ಗ್ರಾಮದ ಬೋರುಗುಡ್ಡೆ ನಿವಾಸಿ ವಿಶ್ವನಾಥ ಪೂಜಾರಿ ಬಿನ್ ಶಿವಪ್ಪ ಪೂಜಾರಿ ಅವರ ವಾಸ್ತವ್ಯದ ಮನೆ ಮತ್ತು ಅಡಿಕೆ ತೋಟಕ್ಕೆ ಭಾಗಶಃ ಹಾನಿಯಾಗಿದೆ. ಇಲ್ಲಿನ ಮಾಣಿಮಜಲು ನಿವಾಸಿ ಉಮೇಶ್ ಕುಮಾರ್ ಡಿ ಬಿನ್ ದಾಸಪ್ಪ ಸಪಲ್ಯ ಅವರ ಮನೆಗೆ ತೀವ್ರ ಹಾನಿಯಾಗಿದೆ. ಸದ್ರಿ ಮನೆಯು ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಮನೆ ಮಂದಿಯನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಅಮ್ಟೂರು ಗ್ರಾಮದ ನಿವಾಸಿ ಸಲೀಂ ಬಿನ್ ಅಬೂಬಕ್ಕರ್ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮಳೆ ಅಬ್ಬರ ತಗ್ಗಿದರೂ ಮುಂದುವರಿದ ಮಳೆ ಹಾನಿ ಪ್ರಕರಣಗಳು Rating: 5 Reviewed By: karavali Times
Scroll to Top