ಬಂಟ್ವಾಳ, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ವಾಮದಪದವು ಸಮೀಪದ ಆಲದಪದವು ನೂರುಲ್ ಇಸ್ಲಾಂ ಮದರಸ ಹಾಗೂ ಮಸೀದಿ ವತಿಯಿಂದ ದೇಶದ 79ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಹಿರಿಯರಾದ ಪುತ್ತುಮೋನು ಬಸ್ತಿಕೋಡಿ ಧ್ವಜರೋಹಣಗೈದರು. ಮಸೀದಿ ಅಧ್ಯಕ್ಷ ಹಂಝ ಬಸ್ತಿಕೋಡಿ ಹಾಗೂ ಇಮಾಮ್ ಅಬೂಬಕ್ಕರ್ ಸಿದ್ದೀಕ್ ಹಮದಾನಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿರಾಜ್ ಬಸ್ತಿಕೋಡಿ, ಕೋಶಾಧಿಕಾರಿ ಇಮ್ರಾನ್ ಬಸ್ತಿಕೋಡಿ ಹಾಗೂ ಹಾಜಿ ಅಬ್ದುಲ್ ರಹಿಮಾನ್, ಬಶೀರ್ ಪಾಲ್ಕೆ, ಅಬ್ಬು ನಡಾಯಿ ಹಾಗೂ ಜಮಾಅತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.
0 comments:
Post a Comment