ಮಂಗಳೂರು, ಸೆಪ್ಟೆಂಬರ್ 17, 2025 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೊನ್ನಕಟ್ಟೆ-ಕಾನಾ ರಸ್ತೆಯ ರೈಲ್ವೆ ಮೇಲ್ಸೇತುವೆಯಲ್ಲಿ ಕಾಂಕ್ರೀಟೀಕರಣ ಕೈಗೆತ್ತಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಸೇತುವೆಯಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16ರವರೆಗೆ ಒಟ್ಟು 30 ದಿನಗಳ ಕಾಲ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಈ ಅವಧಿಯಲ್ಲಿ ವಾಹನಗಳು ಮಂಗಳೂರಿನಿಂದ ಕುಳಾಯಿ ಹೊನ್ನಕಟ್ಟೆ ಮೂಲಕ ಎಂ.ಆರ್.ಪಿ.ಎಲ್ ಕಡೆಗೆ ಸಂಚರಿಸುವ ವಾಹನಗಳು ಹೊಸಬೆಟ್ಟು-ಸುರತ್ಕಲ್ ಜಂಕ್ಷನ್ ಮುಖಾಂತರವಾಗಿ ಎಂ.ಆರ್.ಪಿ.ಎಲ್ ಕಡೆಗೆ ಸಂಚರಿಸಬೇಕು., ಎಂ.ಆರ್.ಪಿ.ಎಲ್ ನಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಎಂ.ಆರ್.ಪಿ.ಎಲ್-ಸುರತ್ಕಲ್ ಜಂಕ್ಷನ್ನಿಗೆ ಬಂದು ಎನ್.ಎಚ್-66 ಸರ್ವಿಸ್ ರಸ್ತೆಯಲ್ಲಿ ಗೋವಿಂದಾಸ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬೇಕು., ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿದೆ., ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಗೋವಿಂದದಾಸ್ ಕಡೆಯಿಂದ ಸುರತ್ಕಲ್ ಕಡೆ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದೆ., ಸಂಚಾರ ದಟ್ಟನೆ ಸಮಯದಲ್ಲಿ ಎಂ.ಆರ್.ಪಿ.ಎಲ್, ಎಚ್.ಪಿ.ಎಸ್.ಎಲ್, ಬಿ.ಎ.ಎಸ್.ಎಫ್ ಹಾಗೂ ಇತರ ಕಂಪೆನಿಗಳ ವಾಹನಗಳು ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ಬಾರದಂತೆ ನಿಷೇಧಿಸಿದೆ. (ಬೆಳಿಗ್ಗೆ 8 ರಿಂದ 9 ಗಂಟೆ, ಸಂಜೆ 4 ರಿಂದ 6 ಗಂಟೆ)
ವಾಹನ ಸವಾರರು ಮತ್ತು ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.
0 comments:
Post a Comment