ಸರಕಾರ ಆರ್.ಎಸ್.ಎಸ್. ನಿಷೇಧ ಮಾಡಿಲ್ಲ, ಬಿಜೆಪಿ ಮಾಡಿದ ಆದೇಶವನ್ನೇ ಪುನರುಚ್ಚರಿಸಲಾಗಿದೆ : ಸಿದ್ದರಾಮಯ್ಯ - Karavali Times ಸರಕಾರ ಆರ್.ಎಸ್.ಎಸ್. ನಿಷೇಧ ಮಾಡಿಲ್ಲ, ಬಿಜೆಪಿ ಮಾಡಿದ ಆದೇಶವನ್ನೇ ಪುನರುಚ್ಚರಿಸಲಾಗಿದೆ : ಸಿದ್ದರಾಮಯ್ಯ - Karavali Times

728x90

20 October 2025

ಸರಕಾರ ಆರ್.ಎಸ್.ಎಸ್. ನಿಷೇಧ ಮಾಡಿಲ್ಲ, ಬಿಜೆಪಿ ಮಾಡಿದ ಆದೇಶವನ್ನೇ ಪುನರುಚ್ಚರಿಸಲಾಗಿದೆ : ಸಿದ್ದರಾಮಯ್ಯ

ಪುತ್ತೂರು, ಅಕ್ಟೋಬರ್ 20, 2025 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಆರ್.ಎಸ್.ಎಸ್ ನಿಷೇಧ ಮಾಡಿಲ್ಲ. ಶಾಲಾ-ಕಾಲೇಜು ಆವರಣದಲ್ಲಿ ಸಂಘ-ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶದಲ್ಲಿ  ಆರ್.ಎಸ್.ಎಸ್ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಸಿಎಂ ಸಿದ್ದರಾಮ್ಯ ಹೇಳಿದರು. 

ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಆದೇಶದಲ್ಲಿ ಯಾವುದೇ ನಿರ್ದಿಷ್ಟ ಸಂಘ ಅಥವಾ ಸಂಸ್ಥೆ ಎಂದು ಇಲ್ಲ. ಬಿಜೆಪಿ ಸರ್ಕಾರ ಆದೇಶ ಮಾಡಿದ್ದನ್ನೇ ನಾವು ಪುನರುಚ್ಚರಿಸಿದ್ದೇವೆ. ಅವರು ಮಾಡಬಹುದು, ನಾವು ಮಾಡಬಾರದೇ? ಎಂದು ಪ್ರಶ್ನಿಸಿದರು. 

2013ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಶಾಲಾ ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿದ್ದರು. ಜಗದೀಶ ಶೆಟ್ಟರ್ ಅವರು ಶಿಕ್ಷಣ ಇಲಾಖೆ ಆದೇಶ ಮಾಡಿತ್ತು ನಾನಲ್ಲ ಎಂದಿದ್ದಾರೆ. ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಆದೇಶ ಹೊರಡಿಸಿದ್ದಾರೆ.

ಸಂಘ ಸಂಸ್ಥೆಗಳಿಗೆ ಅನುಮತಿ ಕೊಡಲೇಬೇಕು ಎಂದು ಏನಿಲ್ಲ. ಶಾಂತಿ ಸುವ್ಯವಸ್ಥೆ ಮೇಲೆ ಬೀರುವ ಪರಿಣಾಮವನ್ನು ಯೋಚಿಸಿ ಅನುಮತಿ ನೀಡುವುದು, ಬಿಡುವುದು ಅವಲಂಬಿತವಾಗಿದೆ ಎಂದವರು ಹೇಳಿದರು.

  • Blogger Comments
  • Facebook Comments

0 comments:

Post a Comment

Item Reviewed: ಸರಕಾರ ಆರ್.ಎಸ್.ಎಸ್. ನಿಷೇಧ ಮಾಡಿಲ್ಲ, ಬಿಜೆಪಿ ಮಾಡಿದ ಆದೇಶವನ್ನೇ ಪುನರುಚ್ಚರಿಸಲಾಗಿದೆ : ಸಿದ್ದರಾಮಯ್ಯ Rating: 5 Reviewed By: karavali Times
Scroll to Top