ಬಂಟ್ವಾಳ, ಅಕ್ಟೋಬರ್ 17, 2025 (ಕರಾವಳಿ ಟೈಮ್ಸ್) : ತುಂಬೆ ಗ್ರಾಮ ಪಂಚಾಯತಿಯಿಂದ 3.60 ಲಕ್ಷ ರೂಪಾಯಿ ಅನುದಾನದಿಂದ ತುಂಬೆಯ ಮುಳಿಪಡ್ಪು ಹಿಂದೂ ರುದ್ರ ಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ ಸಾಲಿಯಾನ್ ತುಂಬೆ, ಗ್ರಾ ಪಂ ಸದಸ್ಯೆ ಹೇಮಲತಾ ಜಿ ಪೂಜಾರಿ, ಪ್ರಮುಖರಾದ ಸಂಜಿತ್ ಪೂಜಾರಿ, ಅಶೋಕ್ ಕೊಟ್ಟಿಂಜ, ಗುತ್ತಿಗೆದಾರ ಪ್ರಶಾಂತ್ ಕೊಟ್ಟಾರಿ, ತಿಮಪ್ಪ ಬೆಳ್ಚಡ ಮೊದಲಾದವರು ಉಪಸ್ಥಿತರಿದ್ದರು.













0 comments:
Post a Comment