ಬಂಟ್ವಾಳ, ಅಕ್ಟೋಬರ್ 30, 2025 (ಕರಾವಳಿ ಟೈಮ್ಸ್) : ಯಾವುದೋ ಮಾತ್ರೆ ಸೇವಿಸಿ ಮಲಗಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿ ಅ 29 ರಂದು ಸಂಭವಿಸಿದೆ.
ಮೃತ ಮಹಿಳೆಯನ್ನು ಇಲ್ಲಿನ ನಿವಾಸಿ ಶ್ರೀಮತಿ ಹಮೀದಾ (43) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪುತ್ರ ಮೊಹಮ್ಮದ್ ಇಶಾಮ್ (22) ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಇವರ ತಾಯಿ ಶ್ರೀಮತಿ ಹಮೀದಾ ಅವರಿಗೆ ಕಳೆದ ಸುಮಾರು 3 ವರ್ಷದ ಹಿಂದೆ ಎಡ ಭಾಗದ ನರದ ಸಮಸ್ಯೆ ಇದ್ದು ಅವರಿಗೆ ಶಿವಮೊಗ್ಗದಿಂದ ಔಷಧಿ ಮಾಡಲಾಗುತ್ತಿತ್ತು. ಇವರಿಗೆ ಪ್ರತಿದಿನ ಬೆಳಿಗ್ಗೆ, ಮದ್ಯಾಹ್ನ ಹಾಗೂ ರಾತ್ರಿ ಔಷಧಿ ಇರುತ್ತದೆ. ಹೀಗಿರುತ್ತಾ ಅ 28 ರಂದು ಮದ್ಯಾಹ್ನ ಹಮೀದಾ ಅವರು ಊಟ ಮಾಡಿ ಮಲಗಿದ್ದು, ಸಾಯಂಕಾಲ ಅವರಿಗೆ ಔಷಧಿ ಕೊಡಲು ಪುತ್ರ ಇಶಾಮ್ ಅವರು ತಾಯಿಯ ಕೋಣೆಗೆ ಹೋದಾಗ ಅವರು ಮಲಗಿದ್ದರಿಂದ ನಂತರ ಔಷಧಿ ಕೊಡುತ್ತೇನೆಂದು ಬಂದಿದ್ದಾರೆ. ಮತ್ತೆ ರಾತ್ರಿ ಸುಮಾರು 9.30 ರ ವೇಳೆಗೆ ತಾಯಿಗೆ ಔಷಧಿ ಕೊಡಲು ಹೋದಾಗ ಅವರು ಮಲಗಿಕೊಂಡೇ ಇದ್ದು, ಅವರನ್ನು ಎಬ್ಬಿಸಿದಾಗ ಮಾತಾಡದೇ ನಿದ್ದೆಯಲ್ಲೇ ಇದ್ದು, ಕರೆದಾಗಲೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಇದರಿಂದ ಗಾಬರಿಗೊಂಡ ಪುತ್ರ ಇಶಾಮ್ ನೆರೆಯ ಜಲೀಲ್ ಅವರನ್ನು ಕರೆದು ಅವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಆಂಬುಲೆನ್ಸ್ ಕರೆಸಿ, ಮಂಗಳೂರು ಕೊಡಿಯಾಲ್ ಬೈಲ್ ಯೆನಪೆÇೀಯಾ ಆಸ್ಪತ್ರೆಗೆ ರಾತ್ರಿ 11.30 ಗಂಟೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಯಾವುದೋ ಮಾತ್ರೆಯನ್ನು ಸೇವಿಸಿರುವುದಾಗಿ ತಿಳಿಸಿ, ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ 29 ರಂದು ಬೆಳಗ್ಗಿನ ಜಾವ 3.30 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಗ್ಗೆ ಬಂಟ್ವಾಳ ನಗರ ಪೆÇೀಲಿಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
























0 comments:
Post a Comment