ಭಿನ್ನ ಚೇತನ ಕ್ರೀಡಾಪಟುಗಳಿಗೆ ಧನಸಹಾಯಕ್ಕೆ ಅರ್ಜಿ ಆಹ್ವಾನ : ಜನವರಿ 31 ಕೊನೆ ದಿನಾಂಕ - Karavali Times ಭಿನ್ನ ಚೇತನ ಕ್ರೀಡಾಪಟುಗಳಿಗೆ ಧನಸಹಾಯಕ್ಕೆ ಅರ್ಜಿ ಆಹ್ವಾನ : ಜನವರಿ 31 ಕೊನೆ ದಿನಾಂಕ - Karavali Times

728x90

7 January 2026

ಭಿನ್ನ ಚೇತನ ಕ್ರೀಡಾಪಟುಗಳಿಗೆ ಧನಸಹಾಯಕ್ಕೆ ಅರ್ಜಿ ಆಹ್ವಾನ : ಜನವರಿ 31 ಕೊನೆ ದಿನಾಂಕ

ಮಂಗಳೂರು, ಜನವರಿ 08, 2026 (ಕರಾವಳಿ ಟೈಮ್ಸ್) : 2025-26ನೇ ಸಾಲಿಗೆ ಸಾಧನೆ ಯೋಜನೆಯಡಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿಕಲ ಚೇತನ ಕ್ರೀಡಾಪಟುಗಳಿಗೆ ಗರಿಷ್ಠ 50 ಸಾವಿರ ಧನ ಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 

ವಿಕಲಚೇತನರ ಫಲಾನುಭವಿಗಳು ಆನ್‍ಲೈನ್ ಸೇವಾ ಸಿಂಧು ತಂತ್ರಾಂಶದ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಮಂಗಳೂರು ಒನ್ ಹಾಗೂ ನೇರವಾಗಿಯೂ ಸಹ ತಮ್ಮ ಲಾಗಿನ್ ಬಳಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31 ಆಗಿದೆ. 

ಈ ಯೋಜನೆಗೆ ವಿಕಲ ಚೇತನರ ಗುರುತಿನ ಚೀಟಿ ಯುಡಿಐಡಿ ಕಾರ್ಡ್, ಆಧಾರ್ ಕಾರ್ಡ್, ಕ್ರೀಡಾಕೂಟದ ಆಮಂತ್ರಣ ಪತ್ರಿಕೆ, ಕ್ರೀಡಾಕೂಟಕ್ಕೆ ಭಾಗವಹಿಸಿದ ಬಗ್ಗೆ ಭಾಗವಹಿಸಿರುವ ಪ್ರಮಾಣ ಪತ್ರ ಅಥವಾ ಪ್ರಶಸ್ತಿ ಪ್ರಮಾಣ ಪತ್ರ, ಕ್ರೀಡಾಕೂಟಕ್ಕೆ ಭಾಗವಹಿಸಿರುವ ಬಗ್ಗೆ ಭಾವಚಿತ್ರಗಳು, ಪ್ರಯಾಣ ವೆಚ್ಚದ ಹಾಗೂ ಪೆÇೀಷಾಕುಗಳನ್ನು ಖರೀದಿಸಿದ ಬಿಲ್ಲುಗಳು, ಯುವ ಜನಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಅಭಿಪ್ರಾಯ ಪತ್ರ, ಅಂತÀರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವವರು ವೀಸಾ ಶುಲ್ಕದ ಬಿಲ್ಲುಗಳು ಹಾಗೂ ಬೋರ್ಡಿಂಗ್ ಪಾಸ್ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದಂತೆ ಭರಿಸಿರುವ ವೆಚ್ಚಗಳ ಮೂಲ ಬಿಲ್ಲುಗಳು, ಸ್ವಯಂ ಘೋಷಣೆ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹೊಂದಿರಬೇಕು.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಎಂ.ಆರ್.ಡಬ್ಲ್ಯೂಗಳು ಮಂಗಳೂರು 9110897458, ಬಂಟ್ವಾಳ 9164645616, ಪುತ್ತೂರು ಮತ್ತು ಕಡಬ7760620538, ಸುಳ್ಯ 8105300057, ಬೆಳ್ತಂಗಡಿ 9480281513 ಅಥವಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿಕಲಚೇತನರ ಕಲ್ಯಾಣಾಧಿಕಾರಿ ಕಚೇರಿ ದೂರವಾಣಿ ಸಂಖ್ಯೆ  0824-2455999) ಯನ್ನು ಸಂಪರ್ಕಿಸಬಹುದು ಎಂದು  ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಭಿನ್ನ ಚೇತನ ಕ್ರೀಡಾಪಟುಗಳಿಗೆ ಧನಸಹಾಯಕ್ಕೆ ಅರ್ಜಿ ಆಹ್ವಾನ : ಜನವರಿ 31 ಕೊನೆ ದಿನಾಂಕ Rating: 5 Reviewed By: karavali Times
Scroll to Top