ರಾಜ್ಯದಲ್ಲಿ ಸಿಎಂ ಬದಲಾವಣೆ ಮೂಲಕ ರಾಜಕೀಯ ಸ್ಥಿತ್ಯಂತರ ಸಂದರ್ಭದಲ್ಲೇ ಬಂಟ್ವಾಳದಲ್ಲಿ 50 ವರ್ಷಗಳಿಂದ ಬಿಜೆಪಿಯಲ್ಲಿದ್ದ ವ್ಯಕ್ತಿ ಕೈ ಪಕ್ಷಕ್ಕೆ ಜಂಪ್ - Karavali Times ರಾಜ್ಯದಲ್ಲಿ ಸಿಎಂ ಬದಲಾವಣೆ ಮೂಲಕ ರಾಜಕೀಯ ಸ್ಥಿತ್ಯಂತರ ಸಂದರ್ಭದಲ್ಲೇ ಬಂಟ್ವಾಳದಲ್ಲಿ 50 ವರ್ಷಗಳಿಂದ ಬಿಜೆಪಿಯಲ್ಲಿದ್ದ ವ್ಯಕ್ತಿ ಕೈ ಪಕ್ಷಕ್ಕೆ ಜಂಪ್ - Karavali Times

728x90

28 May 2026

ರಾಜ್ಯದಲ್ಲಿ ಸಿಎಂ ಬದಲಾವಣೆ ಮೂಲಕ ರಾಜಕೀಯ ಸ್ಥಿತ್ಯಂತರ ಸಂದರ್ಭದಲ್ಲೇ ಬಂಟ್ವಾಳದಲ್ಲಿ 50 ವರ್ಷಗಳಿಂದ ಬಿಜೆಪಿಯಲ್ಲಿದ್ದ ವ್ಯಕ್ತಿ ಕೈ ಪಕ್ಷಕ್ಕೆ ಜಂಪ್

ಬಂಟ್ವಾಳ, ಮೇ 29, 2026 (ಕರಾವಳಿ ಟೈಮ್ಸ್) : ಒಂದೆಡೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮೂಲಕ ರಾಜಕೀಯ ಸ್ಥಿತ್ಯಂತರ ಪ್ರಕ್ರಿಯೆ ನಡೀತಿದ್ದರೆ, ಇತ್ತ ಬಂಟ್ವಾಳದಲ್ಲಿ ಸುಮಾರು 50 ವರ್ಷಗಳಿಂದ ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದು, ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಿಕೊಂಡಿದ್ದ ಬೋಳಂತೂರು-ರಾಕೋಡಿಯ ಈಶ್ವರ ಭಟ್ ಅವರು ಬಿಜೆಪಿ ಪಕ್ಷ ತ್ಯಜಿಸಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. 

ಈಶ್ವರ್ ಭಟ್ ಅವರು ಸುಮಾರು 50 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದು ಬೋಳಂತ್ತೂರಿನಲ್ಲಿ ಧಾರ್ಮಿಕ, ರಾಜಕೀಯ, ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೋಳಂತ್ತೂರಿನ ಹಲವು ಸಂಘ ಸಂಸ್ಥೆಗಳಲ್ಲಿ ಪ್ರಮುಖರಾಗಿದ್ದುಕೊಂಡು ತನ್ನ ಮುಂದಾಳತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ನೇತೃತ್ವ ನೀಡಿರುತ್ತಾರೆ. 

ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು ಬಿಜೆಪಿಯಲ್ಲಿ ಒಬ್ಬ ಕಾರ್ಯಕರ್ತನಿಗೆ ಯಾವುದೇ ಬೆಲೆ ಇರುವುದಿಲ್ಲ. ನನ್ನ ಮಾತಿಗೆ ಯಾವುದೇ ಸ್ಪಂದನೆ ಇಲ್ಲದೆ ಇರುವುದರಿಂದ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ಕಾರ್ಯನಿಷ್ಠೆ ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮಾಜಿ ಸಚಿವ ಬಿ ರಮಾನಾಥ ರೈ ಅವರ ನಿವಾಸದಲ್ಲಿ ಪಕ್ಷದ ಶಾಲು ಧರಿಸಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಸಿಎಂ ಬದಲಾವಣೆ ಮೂಲಕ ರಾಜಕೀಯ ಸ್ಥಿತ್ಯಂತರ ಸಂದರ್ಭದಲ್ಲೇ ಬಂಟ್ವಾಳದಲ್ಲಿ 50 ವರ್ಷಗಳಿಂದ ಬಿಜೆಪಿಯಲ್ಲಿದ್ದ ವ್ಯಕ್ತಿ ಕೈ ಪಕ್ಷಕ್ಕೆ ಜಂಪ್ Rating: 5 Reviewed By: karavali Times
Scroll to Top