ಬಂಟ್ವಾಳ, ಮೇ 09, 2026 (ಕರಾವಳಿ ಟೈಮ್ಸ್) : ಮಹಿಳೆಯೊಬ್ಬರು ಪಾಳು ಬಿದ್ದ ಮನೆಯ ಜಗಲಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಲಾಡಿ ಗ್ರಾಮದ ಕುಡಿಯಾಡಿಬೈಲು ಎಂಬಲ್ಲಿ ಮೇ 7 ರಂದು ಸಂಭವಿಸಿದೆ.
ಮೃತ ಮಹಿಳೆಯನ್ನು ಇಲ್ಲಿನ ನಿವಾಸಿ ಶ್ರೀಧರ ದಾಸ್ ಎಂಬವರ ಪತ್ನಿ ಜಯಂತಿ (50) ಎಂದು ಹೆಸರಿಸಲಾಗಿದೆ. ಇವರು ಮೇ 7 ರಂದು ಸಂಜೆ ವೇಳೆ, ಶ್ರೀಧರ ದಾಸ್ ಅವರ ತಮ್ಮ ದಿವಂಗತ ವಾಸು ದಾಸ್ ಎಂಬವರ ಪಾಳು ಬಿದ್ದ ಮನೆಯ ಎದುರಿನ ಜಗಲಿಯಲ್ಲಿ ಯಾವುದೋ ಕೊರಗಿನಿಂದ ಅಥವಾ ಯಾವುದೋ ವೈಯಕ್ತಿಕ ಕಾರಣದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment