ಉಪ್ಪಿನಂಗಡಿ, ಮೇ 10, 2026 (ಕರಾವಳಿ ಟೈಮ್ಸ್) : ರೋಡ್ ರೋಲರ್ ಹರಿದು ಬಿಹಾರ ಮೂಲದ ಕಾರ್ಮಿಕ ದಾರುಣವಾಗಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಗಾಂಧಿ ಪಾರ್ಕ್ ಆದಿತ್ಯ ಹೋಟೆಲ್ ಬಳಿ ಮೇ 9 ರಂದು ಸಂಭವಿಸಿದೆ.
ಮೃತ ಕಾರ್ಮಿಕನನ್ನು ಬಿಹಾರ ಮೂಲದ ರಾಮಚಂದ್ರ ಶಿಕಾರಿ (56) ಎಂದು ಹೆಸರಿಸಲಾಗಿದೆ. ರೋಡ್ ರೋಲರ್ ಚಾಲಕ ಎಸ್ ಕೆ ಕಾಜಲ್ ಅವರು ಚಲಾಯಿಸುತ್ತಿದ್ದ ರೋಡ್ ರೋಲರ್ ಶಿಕಾರಿ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment