ಮಂಗಳೂರು, ಜೂನ್ 10, 2026 (ಕರಾವಳಿ ಟೈಮ್ಸ್) : ಉಳ್ಳಾಲ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 76/21 ಕಲಂ 8(ಸಿ) 21(ಬಿ) ಎನ್ ಡಿ ಪಿ ಎಸ್ ಆಕ್ಟ್ ಪ್ರಕರಣದ ಆರೋಪಿ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ, ಉಪ್ಪಳ ಪಚ್ಚಿಲಾಂಬರ್ ಮುಹಮ್ಮದ್ ಅಲಿ ಮಂಝಿಲ್ ನಿವಾಸಿ ಮೊಹಮ್ಮದ್ ಅಲಿ ಅವರ ಪುತ್ರ ಫಜಲ್ (31) ಎಂಬಾತ 2021 ರಲ್ಲಿ ಜಾಮೀನನ ಮೇಲೆ ಹೊರಗಡೆ ಬಂದಿದ್ದು, ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರಿಸಿಕೊಂಡಿದ್ದ. ಈತನನ್ನು ಜೂನ್ 9 ರಂದು ಉಪ್ಪಳದಿಂದ ದಸ್ತಗಿರಿ ಮಾಡಿರುವ ಉಳ್ಳಾಲ ಪೊಲೀಸರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಮಂಗಳೂರು ಸ್ಪೆಷಲ್ ಕೇಸ್ ನಂಬರ್ 23/2026 ರಂತೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
10 June 2026
- Blogger Comments
- Facebook Comments
Subscribe to:
Post Comments (Atom)













0 comments:
Post a Comment