ಜುಲೈ 22 ರಿಂದ 25ರವರೆಗೆ ಮಂಗಳೂರಿನ ವಿವಿಧೆಡೆ ಭಯೋತ್ಪಾದನಾ ನಿಗ್ರಹದಳ ಕಾರ್ಯಾಚರಣೆ : ಸಾರ್ವಜನಿಕರು ಸಹಕರಿಸುವಂತೆ ಡೀಸಿ ಸೂಚನೆ - Karavali Times ಜುಲೈ 22 ರಿಂದ 25ರವರೆಗೆ ಮಂಗಳೂರಿನ ವಿವಿಧೆಡೆ ಭಯೋತ್ಪಾದನಾ ನಿಗ್ರಹದಳ ಕಾರ್ಯಾಚರಣೆ : ಸಾರ್ವಜನಿಕರು ಸಹಕರಿಸುವಂತೆ ಡೀಸಿ ಸೂಚನೆ - Karavali Times

728x90

21 July 2026

ಜುಲೈ 22 ರಿಂದ 25ರವರೆಗೆ ಮಂಗಳೂರಿನ ವಿವಿಧೆಡೆ ಭಯೋತ್ಪಾದನಾ ನಿಗ್ರಹದಳ ಕಾರ್ಯಾಚರಣೆ : ಸಾರ್ವಜನಿಕರು ಸಹಕರಿಸುವಂತೆ ಡೀಸಿ ಸೂಚನೆ

ಮಂಗಳೂರು, ಜುಲೈ 21, 2026 (ಕರಾವಳಿ ಟೈಮ್ಸ್) : ರಾಷ್ಟ್ರೀಯ ಭದ್ರತಾ ದಳ (ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್-ಎನ್ ಎಸ್ ಜಿ) ತಂಡವು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಜುಲೈ 22 ರಿಂದ 25ರವರೆಗೆ ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು (ಕೌಂಟರ್ ಟೆರರಿಸ್ಟ್ ಎಕ್ಸರ್ ಸೈಸ್) ನಡೆಸಲಿದೆ.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಕೇವಲ ಭದ್ರತಾ ಸನ್ನದ್ಧತೆಯನ್ನು ಪರೀಕ್ಷಿಸುವ ಉದ್ದೇಶದಿಂದ ನಡೆಸಲಾಗುತ್ತಿದ್ದು, ಕಾರ್ಯಾಚರಣೆಯ ಅವಧಿಯಲ್ಲಿ ಸಾರ್ವಜನಿಕರು ಸಂಚಾರ ನಿಯಂತ್ರಣ ಸೇರಿದಂತೆ ಭದ್ರತಾ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ ಅಗತ್ಯ ಸಹಕಾರ ನೀಡುವಂತೆ ಹಾಗೂ ಯಾವುದೇ ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತ ಮತ್ತು ಪೆÇಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಜುಲೈ 22 ರಿಂದ 25ರವರೆಗೆ ಮಂಗಳೂರಿನ ವಿವಿಧೆಡೆ ಭಯೋತ್ಪಾದನಾ ನಿಗ್ರಹದಳ ಕಾರ್ಯಾಚರಣೆ : ಸಾರ್ವಜನಿಕರು ಸಹಕರಿಸುವಂತೆ ಡೀಸಿ ಸೂಚನೆ Rating: 5 Reviewed By: karavali Times
Scroll to Top