ಬಿ.ಸಿ.ರೋಡಿನ ಅವೈಜ್ಞಾನಿಕ ಸರ್ಕಲ್ಲಿನಲ್ಲಿ ಮತ್ತೊಂದು ಭೀಕರ ಅಪಘಾತ : ಟಿಪ್ಪರ್ ಹರಿದು ಸ್ಕೂಟರ್ ಸಹಸವಾರ ದಾರುಣ ಮೃತ್ಯು, ಸವಾರ ಗಂಭೀರ - Karavali Times ಬಿ.ಸಿ.ರೋಡಿನ ಅವೈಜ್ಞಾನಿಕ ಸರ್ಕಲ್ಲಿನಲ್ಲಿ ಮತ್ತೊಂದು ಭೀಕರ ಅಪಘಾತ : ಟಿಪ್ಪರ್ ಹರಿದು ಸ್ಕೂಟರ್ ಸಹಸವಾರ ದಾರುಣ ಮೃತ್ಯು, ಸವಾರ ಗಂಭೀರ - Karavali Times

728x90

6 August 2026

ಬಿ.ಸಿ.ರೋಡಿನ ಅವೈಜ್ಞಾನಿಕ ಸರ್ಕಲ್ಲಿನಲ್ಲಿ ಮತ್ತೊಂದು ಭೀಕರ ಅಪಘಾತ : ಟಿಪ್ಪರ್ ಹರಿದು ಸ್ಕೂಟರ್ ಸಹಸವಾರ ದಾರುಣ ಮೃತ್ಯು, ಸವಾರ ಗಂಭೀರ

ಬಂಟ್ವಾಳ, ಆಗಸ್ಟ್ 06, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಅವೈಜ್ಞಾನಿಕ ಸರ್ಕಲಿನಲ್ಲಿ ಗುರುವಾರ ಸಂಜೆ ವೇಳೆ ಮತ್ತೊಂದು ಭೀಕರ ಸಂಭವಿಸಿ ಓರ್ವ ದಾರುಣವಾಗಿ ಮೃತಪಟ್ಟಿದ್ದಾನೆ. 

ಮೃತ ವ್ಯಕ್ತಿಯನ್ನು ಸ್ಕೂಟರ್ ಸಹಸವಾರ ಸವಾರ ಯಶ್ವಂತ ಕುಲಾಲ್ ಎಂದು ಹೆಸರಿಸಲಾಗಿದ್ದು, ಸ್ಕೂಟರ್ ಸವಾರ ದಯಾನಂದ ಕುಲಾಲ್ ಗಂಭೀರ ಗಾಯಗೊಂಡಿದ್ದಾರೆ. ಆಗಸ್ಟ್ 6 ರಂದು ಸಂಜೆ ಸುಮಾರು 6.30 ರ ವೇಳೆಗೆ ಬಿ ಸಿ ರೋಡಿನ ಮುಖ್ಯ ವೃತ್ತದಲ್ಲಿ ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಸಂಚರಿಸುತ್ತಿದ್ದ ಸ್ಕೂಟರಿಗೆ ಕಲ್ಲಡ್ಕ ಕಡೆಯಿಂದ ಲೊರೆಟ್ಟೊ ಕಡೆಗೆ ಪಲ್ಲಮಜಲು ನಿವಾಸಿ ಸಲ್ಮಾನ್ ಫಾರೂಕ್ ಎಂಬವರು ಚಲಾಯಿಸುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. 

ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರರಿಬ್ಬರ ಮೇಲೆ ಟಿಪ್ಪರ್ ಲಾರಿ ಹರಿದು ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ ಗಾಯಾಳು ಯಶವಂತ ಕುಲಾಲ್ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ದಯಾನಂದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡಿನ ಅವೈಜ್ಞಾನಿಕ ಸರ್ಕಲ್ಲಿನಲ್ಲಿ ಮತ್ತೊಂದು ಭೀಕರ ಅಪಘಾತ : ಟಿಪ್ಪರ್ ಹರಿದು ಸ್ಕೂಟರ್ ಸಹಸವಾರ ದಾರುಣ ಮೃತ್ಯು, ಸವಾರ ಗಂಭೀರ Rating: 5 Reviewed By: karavali Times
Scroll to Top