ಮೈಸೂರು, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ಮೈಸೂರು ಬಡೇ ಮಖಾಂ ದರ್ಗಾ ಶರೀಫ್ ವಠಾರದಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಸಜ್ಜಾದಾ ನಶೀನ್ ಅಲ್ತಾಫ್ ಪೀರಾ ಅವರು ಧ್ವಜಾರೋಹಣಗೈದರು. ಮೈಸೂರು ಅತಾಯೇ ರಸೂಲ್ ಮೂವ್ ಮೆಂಟ್ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ, ಕಾರ್ಪೊರೇಟರ್ ರಫೀಕ್, ಅಬ್ದುಲ್ ಸಲಾಂ ಮೌಲಾನಾ ರಝ್ವಿ, ಸಯ್ಯದ್ ಗೌಸ್ ಪೀರ್ ಷಾ ಖಾದ್ರಿ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಬಡೇ ಮಕಾನ್ ಮದರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.



























0 comments:
Post a Comment